Webdunia - Bharat's app for daily news and videos

Install App

ಕನ್ನಡ ಭಾಷೆಗೆ ಅಪಮಾನ ಮಾಡದಿರಿ, ಇದನ್ನು ಸಹಿಸಲು ಅಸಾಧ್ಯ: ಸಿಟಿ ರವಿ

Sampriya
ಮಂಗಳವಾರ, 27 ಮೇ 2025 (18:21 IST)
ಬೆಂಗಳೂರು: ಕರ್ನಾಟಕದಲ್ಲಿ ಯಾವ ಸರಕಾರ ಇದೆ? ಸಿದ್ದರಾಮಯ್ಯರ ಸರಕಾರವೇ? ಟಿಪ್ಪು ಸುಲ್ತಾನ್ ಸರಕಾರವೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್, ಮೈಸೂರು ಸಂಸ್ಥಾನವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದ್ದಾಗ ಕನ್ನಡ ಆಡಳಿತ ಭಾಷೆಯ ಬದಲಾಗಿ ಪಾರ್ಸಿ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿದ್ದ ಎಂದು ಗಮನ ಸೆಳೆದರು.

ಇವರ ಮೇಲೆ ಏನಾದರೂ ಟಿಪ್ಪುವಿನ ಭೂತದ ಪರಕಾಯ ಪ್ರವೇಶ ಆಗಿದೆಯೇ ಎಂದು ಕೇಳಿದರು. ಇವರ ಮೂಲಕ ಕನ್ನಡವನ್ನು ಎರಡನೇ ದರ್ಜೆಗೆ, ಮೂರನೇ ದರ್ಜೆಗೆ ಇಳಿಸುವ ಮತ್ತು ಕನ್ನಡದ ಸಹೋದರ ಭಾಷೆಗಳನ್ನು ಮುಗಿಸುವಂಥ ಯೋಜನೆ ಹಾಕಿಕೊಂಡಿದ್ದಾರಾ ಎಂಬ ಅನುಮಾನ ಬಂತು. ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಮುಖ್ಯಮಂತ್ರಿಗಳ ರಾಜಕಾರಣವು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ ರಾಜ್ಯ ಮಟ್ಟದಲ್ಲಿ ಸುದ್ದಿ ಆಗಿತ್ತು ಎಂದು ವಿವರಿಸಿದರು. ನನಗೆ ಆಶ್ಚರ್ಯ ಮತ್ತು ಆಘಾತ ಆಗಿದೆ. ಕರ್ನಾಟಕದಲ್ಲಿ ಉರ್ದು ಭಾಷೆಯನ್ನು ಪ್ರಮೋಟ್ ಮಾಡಲು 100 ಕೋಟಿ, ಕನ್ನಡಕ್ಕೆ 32 ಕೋಟಿ, ಕೊಡವ, ಕೊಂಕಣಿ, ತುಳು ಭಾಷೆಗಳಿಗೆ 45 ಲಕ್ಷ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಯಾವ ಸರಕಾರ ಇದೆ? ಎಂದು ಪ್ರಶ್ನಿಸಿದರು.

ಒಂದು ಕಡೆ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಬದಲಿಗೆ ನಾವು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದ್ದೇವೆ. ಇನ್ನೊಂದು ಕಡೆ ಕನ್ನಡ ಭಾಷಾ ಬೆಳವಣಿಗೆಗೆ 32 ಕೋಟಿ ಕೊಟ್ಟು, ಉರ್ದುವಿಗೆ 100 ಕೋಟಿ ಕೊಡುವುದಾದರೆ, ಇದು ಕ್ಷಮಿಸಲಾಗದ ಅಪರಾಧ; ನಾಚಿಕೆಗೇಡಿನ ಸಂಗತಿ. ತಕ್ಷಣ ಈ ನಿರ್ಧಾರವನ್ನು ವಾಪಸ್ ಪಡೆಯಲು ಆಗ್ರಹಿಸಿದರು.
ಕನ್ನಡ ಭಾಷೆಗೆ ಅಪಮಾನ ಮಾಡದಿರಿ. ಇದನ್ನು ಸಹಿಸಲು ಅಸಾಧ್ಯ ಎಂದು ಎಚ್ಚರಿಸಿದರು. ಇದು ಚರಿತ್ರೆಯಲ್ಲಿ ಮುಖ್ಯಮಂತ್ರಿಗಳು, ಸರಕಾರಕ್ಕೆ ಕಳಂಕ ತರಲಿದೆ ಎಂದು ಎಚ್ಚರಿಸಿದರು.

ಪಕ್ಷದ್ರೋಹ ಸಹಿಸಲಾಗದು:
ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆ ಕುರಿತ ಪ್ರಶ್ನೆಗೆ ಉತ್ತರಿಸಿ, ಯಾರು ಪಕ್ಷ ದ್ರೋಹ ಮಾಡಿದರೂ ತಪ್ಪೇ ಎಂದು ಉತ್ತರ ಕೊಟ್ಟರು. ಕೆಲವೊಂದು ಸಂಗತಿಗಳಲ್ಲಿ ಶೂನ್ಯ ಸಹಿಷ್ಣುತೆ ಇಟ್ಟುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾರಿ ಶಕ್ತಿಯ ಚಿಹ್ನೆ ಸಿಂಧೂರ್‌: ಅಹಲ್ಯಾಬಾಯಿ ಹೋಳ್ಕರ್‌ಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

London viral video: ಈಕೆ ಕೈಯಲ್ಲಿ ಊಟ ಮಾಡಿದ್ದೇ ತಪ್ಪಾಯ್ತು, ಏನಾಗಿದೆ ವಿಡಿಯೋ ನೋಡಿ

ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ತೆರಿಗೆ ಹಣ ಬಳಕೆ: BY ವಿಜಯೇಂದ್ರ ಟೀಕೆ

Karkala: ಸಜೀವ ದಹನವಾದ ಕಂಬಳದ ಚಾಂಪಿಯನ್ ಕೋಣಗಳಿಗೆ ಒಡೆಯನ ಕಣ್ಣೀರ ವಿದಾಯ video

World No Tobbacco Day: ಆರೋಗ್ಯ ದೃಷ್ಟಿಯಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಸರ್ಕಾರ

ಮುಂದಿನ ಸುದ್ದಿ
Show comments