Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ನಟ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದು ಏಕೆ ಗೊತ್ತಾ?

ಅಭಿಮಾನಿಗಳಿಗೆ ನಟ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದು ಏಕೆ ಗೊತ್ತಾ?
ಬೆಂಗಳೂರು , ಭಾನುವಾರ, 21 ಅಕ್ಟೋಬರ್ 2018 (15:17 IST)
ನಟ ಸುದೀಪ್ ಅಭಿಮಾನಿಗಳ ಅಭಿಮಾನದ ಪರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿ ವಿಲನ್ ಸಿನಿಮಾ ಯಶಸ್ಸು ಕಾಣಲಿ ಎಂದು ಪ್ರೇಮ್ ಅಭಿಮಾನಿಗಳು ಮೇಕೆ, ಕೋಣ ಕಡಿದಿದ್ದಕ್ಕೆ ನಟ ಸುದೀಪ್ ಆಕ್ರೋಶಗೊಂಡು ಟ್ವೀಟ್ ಮಾಡಿದ್ದಾರೆ.

ದಿ ವಿಲನ್ ಸಿನಿಮಾ ನೋಡಲು ಅಭಿಮಾನಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಕೆಲವರು ಮೂಕ ಪ್ರಾಣಿಗಳನ್ನು ಬಲಿ ಕೊಟ್ಟು ವಿಲನ್ ಸಿನಿಮಾ ಯಶಸ್ಸು ಕಾಣಲಿ ಎಂದು ಹರಕೆ ಹೊತ್ತರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಿಚ್ಚ ಸುದೀಪ್, ಕ್ರೂರತನ ಅಮಾನವೀಯವಾದದ್ದು. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ. ಈ ರೀತಿಯ ಗೌರವ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಥೀಯೇಟರ್ ಬಳಿ ಕೋಣ ಕಡಿದು ಅಭಿಮಾನಿಗಳು ಅತಿರೇಕದಿಂದ ವರ್ತಿಸಿದ್ದರು, ಸುದೀಪ್ ಕಟೌಟ್ ಗೆ ರಕ್ತಾಭಿಷೇಕ ಮಾಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ವಿರುದ್ಧ ಎಫ್ ಐ ಆರ್