Publish Date: Sat, 28 Dec 2019 (10:52 IST)
Updated Date: Sat, 28 Dec 2019 (10:57 IST)
ಬೆಂಗಳೂರು : ಕನಕಪುರ ತಾಲೂಕಿನ ಹಾರೋಬೆಲೆಯಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿಚಾರ ಡಿಕೆಶಿ ವಿರುದ್ಧ ಸಿಎಂ ಪುತ್ರ ಬಿ.ಎಸ್.ವಿಜಯೇಂದ್ರ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ವಿಶ್ವದಲ್ಲಿ ಅತೀ ಎತ್ತರದ ಕಲ್ಲಿನ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ, ಹೈಕಮಾಂಡ್ ಓಲೈಕೆಗೆ ಅಸ್ತ್ರವಾಗಿ ಯೇಸುವನ್ನು ಬಳಸುತ್ತಿದ್ದೀರಾ, ನಾಡಿನ ಸಂಸ್ಕೃತಿ, ಇತಿಹಾಸಕ್ಕೆ ಬಗೆಯುತ್ತಿರುವ ಅಪಚಾರ. ಏಷ್ಯಾದಲ್ಲೇ ಎತ್ತರದ ಯೇಸು ಪ್ರತಿಮೆ ನಿರ್ಮಾಣದ ಸ್ಥಳ ಮಹಿಮೆ ಹಿನ್ನಲೆ ಏನು? ಎಂದು ಟ್ವೀಟ್ ಮೂಲಕ ಮಾಜಿ ಸಚಿವ ಡಿಕೆಶಿಗೆ ಬಿಎಸ್ ವಿಜಯೇಂದ್ರ ಪ್ರಶ್ನೆಮಾಡಿದ್ದಾರೆ.