Select Your Language

Notifications

webdunia
webdunia
webdunia
Wednesday, 9 April 2025
webdunia

ಸಿಗರೇಟ್ ಸೇದಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಪತಿ ಪತ್ನಿಗೆ ಮಾಡಿದ್ದೇನು ಗೊತ್ತಾ?

ಬೆಂಗಳೂರು
ಬೆಂಗಳೂರು , ಶನಿವಾರ, 23 ಫೆಬ್ರವರಿ 2019 (13:16 IST)
ಬೆಂಗಳೂರು : ಸಿಗರೇಟ್ ಸೇದಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಪತಿಯೊಬ್ಬ ಪತ್ನಿಯ ಕಣ್ಣಿಗೆ ಚಾಕು ಚುಚ್ಚಿದ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.


ಗಾಯತ್ರಿ ಹಲ್ಲೆಗೊಳಗಾದ ಪತ್ನಿ, ಧರ್ಮ ಹಲ್ಲೆ ಮಾಡಿದ ಆರೋಪಿ ಪತಿ. ಯಾವುದೇ ಕೆಲಸ ಕಾರ್ಯವಿಲ್ಲದ ಆರೋಪಿ ಯಾವಾಗಲೂ ಕಂಠಪೂರ್ತಿ ಕುಡಿಯುತ್ತಿದ್ದ. ದುಶ್ಚಟಗಳ ಪರಿಣಾಮ ಕ್ಯಾನ್ಸರ್ ಕಾಯಿಲೆ ಅಟ್ಯಾಕ್ ಆಗಿತ್ತು. ಆದ್ದರಿಂದ ಪತ್ನಿ ಗಾಯತ್ರಿ ತಾನೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿ ಪತಿಯನ್ನು ಸಾಕುತ್ತಿದ್ದಳು.


ಆದರೆ ಫೆ. 18ರ ಸಂಜೆ ಪತಿ ಧರ್ಮ ಮನೆ ಮುಂದೆ ಸಿಗರೇಟ್ ಸೇದುತ್ತಿದ್ದಾಗ ಇದನ್ನು ನೋಡಿದ ಪತ್ನಿ ಗಾಯತ್ರಿ ಮತ್ತೆ ಸಿಗರೇಟು ಶುರು ಮಾಡಿದ್ಯಾ ಅದನ್ನು ಬಿಸಾಕು ಎಂದು ಕೈಯಿಂದ ಸಿಗರೇಟು ಕಿತ್ತು ಎಸೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಧರ್ಮ ಅಲ್ಲಿಯೇ ಇದ್ದ ಚಾಕುವಿನಿಂದ ಪತ್ನಿಯ ಎಡಗಣ್ಣಿಗೆ ಚುಚ್ಚಿದ್ದಾನೆ. ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಗಾಯತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ