Select Your Language

Notifications

webdunia
webdunia
webdunia
webdunia

ಲಾರಿಗೆ ಅಡ್ಡ ಬಂದ ಮೊಸಳೆ ಕಥೆ ಏನಾಯ್ತು ಗೊತ್ತಾ?

ಲಾರಿಗೆ ಅಡ್ಡ ಬಂದ ಮೊಸಳೆ ಕಥೆ ಏನಾಯ್ತು ಗೊತ್ತಾ?
ಯಾದಗಿರಿ , ಸೋಮವಾರ, 8 ಅಕ್ಟೋಬರ್ 2018 (16:43 IST)
ಲಾರಿ ಹರಿದು ಮೊಸಳೆ ಸಾವನ್ನಪ್ಪಿದ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ವಡೆಗೇರಾ ತಾಲೂಕಿನ ಕದರಾಪೂರ ಗ್ರಾಮದ ಬಳಿ ರಾತ್ರಿ ವೇಳೆ ಲಾರಿ ಹರಿದು ಮೊಸಳೆ ಸಾವನಪ್ಪಿರುವ ಘಟನೆ ನಡೆದಿದೆ.‌ ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ನದಿಯಲ್ಲಿರುವ ಮೊಸಳೆಗಳು ಆಹಾರವನ್ನು ಹುಡುಕಿಕೊಂಡು ಹೊರ ಬರುತ್ತಿವೆ.

ಕೃಷ್ಣಾ ನದಿಯ ಸುತ್ತಮುತ್ತಲಿನ ಗ್ರಾಮಗಳ ರೈತರ ಹಸುಗಳ ಮೇಯಲು ಹೋಗಿರುವ ಸಮಯದಲ್ಲಿ ಮೊಸಳೆಗಳು ಹಸುಗಳನ್ನು ನುಂಗಿ ಹಾಕುತ್ತಿವೆ. ಗ್ರಾಮಸ್ಥರು ಹಲವಾರು ಬಾರಿ ಅರಣ್ಯ ಅಧಿಕಾರಿಗಳಿಗೆ ಮೊಸಳೆ ಹಾವಳಿ ಬಗ್ಗೆ ತಿಳಿಸಿದ್ದರೂ ಯಾವುದೇ ಪ್ರಯೋಜನೆ ಯಾಗಿರಲಿಲ್ಲ.

ತಡ ರಾತ್ರಿ ವೇಳೆ ಆಹಾರವನ್ನು ಹುಡಕಿಕೊಂಡು ನದಿಯಿಂದ ಮೇಲಿರುವ ಬ್ರಿಜ್ ಕಂ ಬ್ಯಾರೇಜ ಮೇಲೆ ಬಂದ ವೇಳೆ ಲಾರಿ ಹರಿದ ಪರಿಣಾಮ ಮೊಸಳೆಯು ಸಾವನಪ್ಪಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ಯುವಕನ ಸಾವು: ಆಕ್ರೋಶ