Select Your Language

Notifications

webdunia
webdunia
webdunia
webdunia

ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ತಂದೆಯಾಗುತ್ತೇನೆ ಎಂದವನು ಕೊನೆಗೆ ಮಾಡಿದ್ದೇನು ಗೊತ್ತಾ

Crime

Sampriya

ಬೆಂಗಳೂರು , ಭಾನುವಾರ, 25 ಆಗಸ್ಟ್ 2024 (11:41 IST)
ಬೆಂಗಳೂರು: ಪತ್ನಿ ಇಲ್ಲದ ವೇಳೆ ಮಲತಂದೆ ಇಬ್ಬರು ಹೆಣ್ಣು ಮಕ್ಕಳನ್ನು ಬರ್ಬರವಾಗಿ ಕೊಂದು ಘಟನೆ  ಅಮೃತಹಳ್ಳಿಯ ಕಾವೇರಿ ಲೇಜೌಟ್‌ನಲ್ಲಿ ಶನಿವಾರ ನಡೆದಿದೆ. ಆರೋಪಿಯನ್ನು ಉತ್ತರ ಪ್ರದೇಶದ ಸುಮಿತ್ ಎಂದು ಗುರುತಿಸಲಾಗಿದೆ.

ಪತ್ನಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಪತಿ ಸಮಿತ್ ಮನೆಯಲ್ಲಿದ್ದ ಹೆಣ್ಣು ಮಕ್ಕಳನ್ನು ಬರ್ಬರವಾಗಿ ಕೊಚ್ಚಿ ಕೊಂದು, ಎಸ್ಕೇಪ್‌ ಆಗಿದ್ದಾನೆ.  ವಿಚಾರ ಗೊತ್ತಾಗುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ತಾಯಿ ಅನಿತಾಳಿಂದ ದೂರು ಪಡೆದು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಅನಿತಾ ಅವರು ಒಂಬತ್ತು ವರ್ಷಗಳ ಹಿಂದ ಕೆಲ ವೈಯಕ್ತಿಕ ಕಾರಣಗಳಿಂದ ಗಂಡನಿಂದ ವಿಚ್ಚೇದನ ಪಡೆದು ದೂರವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಈ ವೇಳೆ ಅನಿತಾ ಅವರಿಗೆ ಉತ್ತರಪ್ರದೇಶ ಮೂಲದ ಸುಮಿತ್ ಪರಿಚಯವಾಗಿದ್ದಾನೆ. ಮಕ್ಕಳಿಬ್ಬರನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿ ಅನಿತಾಳನ್ನು ಮದುವೆಯಾಗಿದ್ದಾನೆ.

ಅನಿತಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ, ಸುಮಿತ್ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ.ಈಚೆಗೆ ಇಬ್ಬರು ಹೆಣ್ಣು ಮಕ್ಕಳನ್ನು  ನೋಡುತ್ತಿದ್ದರೆ ಸುಮಿತ್‌ಗೆ ಆಗುತ್ತಿರಲಿಲ್ಲ. ಇದೇ ಕೋಪದಲ್ಲೇ ಹೆಂಡತಿ ಇಲ್ಲದ ವೇಳೆ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದಿದ್ದಾನೆ.

ಸದ್ಯ ಅಮೃತಹಳ್ಳಿ‌ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದು, ಮನೆಯ ಸುತ್ತಮುತ್ತ ಇರೋ ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡ್ತಾ ಇದ್ದಾರೆ. ಎಸ್ಕೇಪ್ ಆಗಿರುವ ಸುಮೀತ್‌ಗಾಗಿ ನಾಲ್ಕು ವಿಶೇಷ ತಂಡಗಳಿಂದ ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಯುವತಿ ಮೇಲೆ ಅತ್ಯಾಚಾರ: ದೇಶಕ್ಕೆ ಕಾರ್ಕಳದ ತೀರ್ಪು ಇತಿಹಾಸವಾಗುವಂತಿರಬೇಕು