Select Your Language

Notifications

webdunia
webdunia
webdunia
webdunia

ನರ್ಸಗಳು ಪ್ರತಿಭಟನೆ ಹಾದಿ ತುಳಿದಿದ್ಯಾಕೆ ಗೊತ್ತಾ?

ನರ್ಸಗಳು ಪ್ರತಿಭಟನೆ ಹಾದಿ ತುಳಿದಿದ್ಯಾಕೆ ಗೊತ್ತಾ?
ಚಾಮರಾಜನಗರ , ಶನಿವಾರ, 24 ನವೆಂಬರ್ 2018 (18:33 IST)
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದ ನರ್ಸಗಳು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹ ಮಾಡಿದರು.

ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ ಸ್ಟೆಪಂಡರಿ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಗಳನ್ನು ಮುಂದುವರಿಸುವಂತೆ ಆಗ್ರಹಿಸಿ ಬಿವಿಎಸ್ ಸಂಘಟನೆ ನೇತೃತ್ವದಲ್ಲಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಯಿತು.
ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಗರದ ಪಚ್ಚಪ್ಪ ವೃತ್ತದಲ್ಲಿ  ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಕೆಲ ಕಾಲ ರಸ್ತೆ ತಡೆ ಮಾಡಿದರು. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ನಮ್ಮಿಂದ ಮೂರು ವರ್ಷಗಳ ಕಾಲ ಸೇವೆ ಪಡೆದುಕೊಂಡ ವೈದ್ಯಕೀಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಹಾಗೂ ಡೀನ್ ರಾಜೇಂದ್ರ ಈಗ ನಿಮ್ಮ ಸೇವೆ ನಮಗೆ ಬೇಡ ಅಂತಿದ್ದಾರೆ.

ಹೊಸದಾಗಿ 6 ತಿಂಗಳುಗಳ ಕಾಲ ಸ್ಟೈಫಂಡರಿಯ ನೂತನ ಬ್ಯಾಚ್ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಶಾಶ್ವತ ಸ್ಟಾಪ್ ಬಂದರೆ ನಮ್ಮ ಅಭ್ಯಂತರವಿಲ್ಲ, ತಾತ್ಕಾಲಿಕ ಸ್ಟಾಫ್ ಬರುವುದಾರೆ ನಾವು ಒಪ್ಪಲ್ಲ ಎಂದು ಪ್ರತಿಭಟನಾ ನರ್ಸ್ ಗಳು ಎಚ್ಚರಿಸಿದ್ದಾರೆ.  


Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಬಸ್ ದುರಂತ: ಖರ್ಗೆ ಸಂತಾಪ