ಕೊಪ್ಪಳ : ಕೊರೊನಾ ಸೋಂಕಿತರ ಕೈಗೆ ಫೋನ್ ಕೊಡಬೇಡಿ ಎಂದು ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ವೈದ್ಯರಿಗೆ ಸಲಹೆ ನೀಡಿದ್ದಾರೆ.
ಕೊರೊನಾ ದೊಡ್ಡ ಕಾಯಿಲೆ ಅಲ್ಲ, ಜನರು ಭಯದಿಂದ ಸಾಯುತ್ತಿದ್ದಾರೆ. ಎಂಪಿ, ಎಂಎಲ್ ಎ ಯಾರೇ ಹೇಳಿದರೂ ಮೊಬೈಲ್ ಕೊಡಬೇಡಿ. ರೋಗಿಗಳಿಗೆ ನೀವೇ ಧೈರ್ಯ ಹೇಳಿ ಎಂದು ಹೇಳಿದ್ದಾರೆ.
ಮೊಬೈಲ್ ನೋಡಿದರೆ ರೋಗಿಗಳು ಮತ್ತಷ್ಟು ಭಯ ಬೀಳುತ್ತಾರೆ. ರೋಗಿಗಳಿಗೆ ಮನೆಯವರ ಬಳಿ ಮಾತನಾಡಬೇಕು ಅಂತ ಅನಿಸಿದ್ರೆ ನೀವೆ ಕಾಲ್ ಮಾಡಿ ಕೊಡಿ ಎಂದು ತಿಳಿಸಿದ್ದಾರೆ.