Select Your Language

Notifications

webdunia
webdunia
webdunia
webdunia

ಯಾವುದೇ ಪ್ರಚೋದನೆಗೆ ಒಳಗಾಗಬೇಡಿ, ಶಾಂತಿ ಕಾಪಾಡಿ- ಸಿಎಂ ಮನವಿ

ಯಾವುದೇ ಪ್ರಚೋದನೆಗೆ ಒಳಗಾಗಬೇಡಿ, ಶಾಂತಿ ಕಾಪಾಡಿ- ಸಿಎಂ ಮನವಿ
ಬೆಂಗಳೂರು , ಬುಧವಾರ, 8 ಜನವರಿ 2020 (10:27 IST)
ಬೆಂಗಳೂರು : ಇಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ.


ಭಾರತ್ ಬಂದ್ ನಿಂದ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರಲ್ಲ. ರಾಜ್ಯದಲ್ಲಿ ಎಂದಿನಂತೆ ಜನಜೀವನ ಇರಲಿದೆ. ದಿನನಿತ್ಯದ ಕಾರ್ಯಗಳಿಗೆ ಯಾವುದೇ ತಡೆ ಇಲ್ಲ. ಎಂದಿನಂತೆ ಶಾಲಾ-ಕಾಲೇಜು  ನಡೆಯಲಿದೆ. ಎಂದಿನಂತೆ ಸರ್ಕಾರಿ ಬಸ್ ಸಂಚಾರ ಕೂಡ ಇರಲಿದೆ ಎಂದು ಸಿಎಂ ತಿಳಿಸಿದ್ದಾರೆ.

 

ಹಾಗೇ ಭಾರತ್ ಬಂದ್ ಮಾಡಲು ಒತ್ತಾಯಿಸಿದ್ರೆ ಕಾನೂನು ಕ್ರಮ ಜರುಗಿಸಲಾಗುವುದು. ಯಾವುದೇ ಪ್ರಚೋದನೆಗೆ ಒಳಗಾಗಬೇಡಿ. ಜನರು ಶಾಂತಿ ಕಾಪಾಡಬೇಕೆಂದು ಎಂದು ಸಿಎಂ ರಾಜ್ಯದ ಜನರಲ್ಲಿ ಮನವಿ  ಮಾಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ್ ಬಂದ್ ಹಿನ್ನಲೆ; ಟೀ ಅಂಗಡಿ ಓಪನ್ ಮಾಡಿದ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ ಪ್ರತಿಭಟನಾಕಾರರು