Select Your Language

Notifications

webdunia
webdunia
webdunia
webdunia

ಡಾ ಸಿಎನ್ ಮಂಜುನಾಥ್ ‘ಜಾಣ ಅಳಿಯ’ನೆಂದ ಡಿಕೆ ಸುರೇಶ್

DK Suresh-Dr CN Manjunath

Krishnaveni K

ಬೆಂಗಳೂರು , ಗುರುವಾರ, 14 ಮಾರ್ಚ್ 2024 (16:03 IST)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಎದುರಾಳಿಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದಿಂದ ಕಣಕ್ಕಿಳಿಯುತ್ತಿರುವ ಡಾ ಸಿಎನ್ ಮಂಜುನಾಥ್ ಗೆ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ.

ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕೇಸರು ಶಾಲು ಹಾಕಿ ಬಿಜೆಪಿ ಪಕ್ಷಕ್ಕೆ ಸ್ವಾಗತಿಸಲಾಯಿತು. ನಿನ್ನೆ ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವಾಗ ಡಾ ಸಿಎನ್ ಮಂಜುನಾಥ್ ಹೆಸರೂ ಘೋಷಣೆಯಾಗಿತ್ತು.

ಇದೀಗ ತಮ್ಮ ವಿರುದ್ಧ ಮಂಜುನಾಥ್ ಕಣಕ್ಕಿಳಿಯುವ ವಿಚಾರ ಅಧಿಕೃತವಾಗುತ್ತಿದ್ದಂತೇ ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ. ಡಾ ಸಿಎನ್ ಮಂಜುನಾಥ್ ಜಾಣ ಅಳಿಯ. ಜೆಡಿಎಸ್ ಪಕ್ಷ ಅವರ ಮಾವ (ಎಚ್ ಡಿ ದೇವೇಗೌಡ)ನದ್ದೇ ಆದರೂ ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಅವರಿಗೆ ಗೊತ್ತಿದೆ. ಅದಕ್ಕೇ ಬಿಜೆಪಿಗೆ ಸೇರಿದ್ದಾರೆ ಎಂದು ಡಿಕೆ ಸುರೇಶ್ ಟೀಕಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಜೆಡಿಎಸ್ ಜಾಣ ಅಳಿಯನಾದರೂ ತೊಂದರೆಯಿಲ್ಲ ಆದರೆ ನಿಮ್ಮಂತೆ ಇನ್ನೊಬ್ಬರನ್ನು ಸುಲಿಗೆ ಮಾಡಿ ಬದುಕುವಂತಾಗಬಾರದು ಎಂದಿದೆ. ಇನ್ನೊಂದೆಡೆ, ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದರೂ ತಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ ಎಂದು ಮಂಜುನಾಥ್ ಹೇಳಿದ್ದಾರೆ. ಮೋದಿ, ದೇವೇಗೌಡರಂತಹ ಹಿರಿಯರ ಒಳ್ಳೆಯ ಕೆಲಸ, ಕುಮಾರಸ್ವಾಮಿ ನಾಯಕತ್ವದ ಮಾರ್ಗದರ್ಶನದಲ್ಲಿ ನಡೆಯಲಿದ್ದೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

23 ತಳಿಯ ನಾಯಿಗಳಿಗೆ ಭಾರತದಲ್ಲಿ ನಿಷೇಧ: ಸರ್ಕಾರದ ಆದೇಶದ ಹಿಂದಿರುವ ಕಾರಣ ಗೊತ್ತಾ