Webdunia - Bharat's app for daily news and videos

Install App

ಹೋಟೆಲ್ ರೂಂ ಸಿಗಲಿಲ್ಲ, ಅದಕ್ಕೇ ಡೆಲ್ಲಿಯಲ್ಲಿ ಫ್ಲ್ಯಾಟ್ ತಗೊಂಡಿದ್ದೆ: ಡಿಕೆಶಿ ಸಮಜಾಯಿಷಿ

Webdunia
ಗುರುವಾರ, 21 ಜೂನ್ 2018 (11:19 IST)
ಬೆಂಗಳೂರು: ದೆಹಲಿಯ ತಮ್ಮ ಫ್ಲ್ಯಾಟ್ ಮೇಲೆ ನಡೆದ ಐಟಿ ದಾಳಿ ಮತ್ತು ಆರೋಪಗಳಿಗೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ಕೂಲ್ ಆಗಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ನನಗೆ ಹೋಟೆಲ್ ರೂಂ ಸಿಗಲಿಲ್ಲ. ಅದಕ್ಕೆ ಸಣ್ಣದೊಂದು ಫ್ಲ್ಯಾಟ್ ತಗೊಂಡಿದ್ದೆ. ಆದರೆ ಇಲ್ಲಿಗೆ ಹಣ ಹೇಗೆ ಬಂತು ಎಂದು ನನಗೆ ಗೊತ್ತಿಲ್ಲ. ನಾನು ಹೈಕಮಾಂಡ್ ಗೆ ದುಡ್ಡುಕೊಟ್ಟಿಲ್ಲ. ಹಣದ ವ್ಯವಹಾರದ ವಿಚಾರವೇ ನನಗೆ ಗೊತ್ತಿಲ್ಲ. ಎಲ್ಲದಕ್ಕೂ ಶುಭಗಳಿಗೆ ಬರುತ್ತೆ. ಅದಕ್ಕಾಗಿ ಕಾಯಬೇಕು’ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ವೇಳೆ ಐಟಿ ಇಲಾಖೆಯ ನೋಟಿಸ್ ಅಥವಾ ಕೋರ್ಟ್ ನಿಂದ ಇದುವರೆಗೆ ನೋಟಿಸ್ ನನಗೆ ಬಂದಿಲ್ಲ. ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿರುವ ಡಿಕೆಶಿ, ಎಲ್ಲವನ್ನೂ ನೀವು ಮಾಧ್ಯಮಗಳೇ ಮಾಡುತ್ತೀರಿ. ಬೇರೆ ಬೇರೆ ಸುದ್ದಿ, ವಿಡಿಯೋ ತೋರಿಸಿ ಜನರನ್ನು ಸಂತೋಷಪಡಿಸುತ್ತೀರಿ. ಜನರನ್ನು ಸಂತೋಷ ಪಡಿಸುವುದೇ ಒಳ್ಳೆ ಕೆಲ್ಸ ಎಂದು ವ್ಯಂಗ್ಯವಾಗಿ ಮಾಧ್ಯಮಗಳಿಗೆ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments