Select Your Language

Notifications

webdunia
webdunia
webdunia
webdunia

ಸಚಿವ ಮಾಧುಸ್ವಾಮಿಗೆ ಕ್ಲಾಸ್ ತೆಗೆದುಕೊಂಡ ಡಿ.ಕೆ.ಶಿವಕುಮಾರ್

ಸಚಿವ ಮಾಧುಸ್ವಾಮಿಗೆ ಕ್ಲಾಸ್ ತೆಗೆದುಕೊಂಡ ಡಿ.ಕೆ.ಶಿವಕುಮಾರ್
ಬೆಂಗಳೂರು , ಗುರುವಾರ, 21 ಮೇ 2020 (18:26 IST)
ಮಹಿಳೆಯೊಬ್ಬರ ವಿರುದ್ಧ ಅವಾಚ್ಯವಾಗಿ ಬೈಯ್ದಿರುವ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ತಿರುಗಿ ಬಿದ್ದಿದೆ.

ಮಹಿಳೆಯ ಮಾತಿನಿಂದಾಗಿ ಸಚಿವರಿಗೆ ಕಿರಿಕಿರಿ ಎನಿಸಿರಬಹುದು. ಆದರೆ ಅಷ್ಟಕ್ಕೆ ಅವಾಚ್ಯವಾಗಿ ಬೈಯುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹಿರಿಯ ಸಚಿವರಾಗಿ ಮಾಧುಸ್ವಾಮಿ ನಡೆದುಕೊಂಡಿದ್ದರ ಬಗ್ಗೆ ಆಶ್ಚರ್ಯ ಮೂಡಿಸಿದೆ ಎಂದಿರುವ ಡಿಕೆಶಿ, ಮಂತ್ರಿಗಳ ಹತ್ತಿರ ಯಾರೇ ಆಗಲಿ ಬಂದು ಕಷ್ಟ, ಸಮಸ್ಯೆ ಹೇಳಿಕೊಂಡಾಗ ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು ಎಂದು ಮಾಧುಸ್ವಾಮಿಗೆ ಟಾಂಗ್ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಎಫೆಕ್ಟ್ : 3 ಮಕ್ಕಳು ಸೇರಿದಂತೆ 9 ಜನರಲ್ಲಿ ಕೊರೊನಾ