ಸದನದಲ್ಲೇ ಆರ್ ಎಸ್ಎಸ್ ಹಾಡು ಹಾಡಿದ ಡಿಕೆ ಶಿವಕುಮಾರ್: ಕೈಗೆ ಕೈ ಕೊಟ್ಟು ಹೋಗ್ತಾರಾ ಎಂದ ಜನ

Krishnaveni K
ಶುಕ್ರವಾರ, 22 ಆಗಸ್ಟ್ 2025 (10:21 IST)
ಬೆಂಗಳೂರು: ಸದನದಲ್ಲೇ ಬಿಜೆಪಿ ನಾಯಕರಿಗೆ ಟಾಂಗ್ ಕೊಡಲು ಡಿಸಿಎಂ ಡಿಕೆ ಶಿವಕುಮಾರ್ ಆರ್ ಎಸ್ಎಸ್ ನ ಧ್ಯೇಯ ಗೀತೆಯಾದ ನಮಸ್ತೇ ಸದಾ ವತ್ಸಲೇ ಹಾಡು ಹಾಡಿದ್ದಾರೆ. ಆದರೆ ಇದಕ್ಕೆ ಸಿಕ್ಕ ರಿಯಾಕ್ಷನ್ ಮಾತ್ರ ಸಖತ್ ಕ್ರೇಝಿಯಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಈಗ ಸಿಎಂ ಆಗಲು ಒಳಗೊಳಗೇ ಪ್ರಯತ್ನ ಪಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ ಬಿಡಿ. ಇದರ ನಡುವೆ ಸದನದಲ್ಲೇ ನಮಸ್ತೇ ಹಾಡು ಹಾಡಿರುವುದು ಎಲ್ಲರೂ ಕಾಲೆಳೆಯಲು ಒಂದು ಅಸ್ತ್ರ ಸಿಕ್ಕಂತಾಯಿತು.

ಆರ್ ಸಿಬಿ ಕಾಲ್ತುಳಿದ ಬಗ್ಗೆ ಸದನದಲ್ಲಿ ಚರ್ಚೆಯಾಗುತ್ತಿತ್ತು. ಡಿಕೆ ಶಿವಕುಮಾರ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಹೋದ ವಿಚಾರವನ್ನು ಆರ್ ಅಶೋಕ್ ಕೆದಕಿದರು. ಆರ್ ಎಸ್ಎಸ್ ಚಡ್ಡಿ ಹಾಕಿದ್ರಲ್ಲ ಎಂದು ಟಾಂಗ್ ಕೊಟ್ಟರು. ಪ್ರತಿಯಾಗಿ ಡಿಕೆ ಶಿವಕುಮಾರ್ ಆರ್ ಎಸ್ಎಸ್ ಗೀತೆ ಹಾಡಿದರು. ಇದಕ್ಕೆ ಸದಸ್ಯರಿಂದ ಚೆನ್ನಾಗಿದೆ ಎಂದು ಅಭಿಪ್ರಾಯವೂ ವ್ಯಕ್ತವಾಯಿತು.

ಆದರೆ ಡಿಕೆಶಿ ಆರ್ ಎಸ್ಎಸ್ ಹಾಡು ಹಾಡಿದ್ದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಸದ್ಯದಲ್ಲೇ ಬಿಜೆಪಿಗೆ ಬರುವ ಸೂಚನೆ ಇದ್ದಂಗಿದೆ. ಕಾಂಗ್ರೆಸ್ ನಲ್ಲಂತೂ ನೀವು ಸಿಎಂ ಆಗಲ್ಲ ಬಿಜೆಪಿಗೆ ಬನ್ನಿ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಆರ್ ಎಸ್ಎಸ್ ಹಾಡು ಹೇಳಿ ಹೈಕಮಾಂಡ್ ಗೆ ಒಳ್ಳೆ ಮೆಸೇಜ್ ಕಳಿಸಿದ್ರಿ ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ತೇಜಸ್ ಯುದ್ಧ ವಿಮಾನ ಪತನವಾದಾಗ ನಕ್ಕ ಪಾಕಿಸ್ತಾನಿಯರು: ವಿಡಿಯೋ ವೈರಲ್

ಬಿಜೆಪಿಯವ್ರೂ ಕಿತ್ತಾಡಿಕೊಂಡೇ ಅಧಿಕಾರ ಕಳೆದುಕೊಂಡ್ರು: ಕಾಂಗ್ರೆಸ್ ಕುರ್ಚಿ ಜಟಾಪಟಿಗೆ ಜನ ಏನಂತಾರೆ

ತೇಜಸ್ ಪತನಕ್ಕೆ ಮುನ್ನ ಪೈಲಟ್ ನಮಾಂಶ್ ಸ್ಯಾಲ್ ಕೊನೆಯ ಕ್ಷಣದ ವಿಡಿಯೋ ವೈರಲ್

ಬೆಂಗಳೂರಿನಲ್ಲಿರುವ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಕುರ್ಚಿ ಜಟಾಪಟಿ ಸರಿ ಮಾಡುವುದೇ ತಲೆನೋವು

ಮುಂದಿನ ಸುದ್ದಿ
Show comments