Webdunia - Bharat's app for daily news and videos

Install App

DK Shivakumar: ಯಾರು ಏನೇ ಹೇಳಲಿ ನೆಹರೂ ಇಲ್ಲದೇ ಈ ದೇಶವೇ ಇಲ್ಲ: ಡಿಕೆ ಶಿವಕುಮಾರ್

Krishnaveni K
ಮಂಗಳವಾರ, 27 ಮೇ 2025 (14:59 IST)
ಬೆಂಗಳೂರು: ನೆಹರೂ ಅವರು ತಮ್ಮ ಅವಧಿಯಲ್ಲಿ ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಶೈಕ್ಷಣಿಕ ಕ್ರಾಂತಿ ಮೂಲಕ ಈ ದೇಶಕ್ಕೆ ಅಡಿಪಾಯ ಹಾಕಿಕೊಟ್ಟಿದ್ದು, ಇದರ ಮೇಲೆ ನಮ್ಮ ದೇಶವನ್ನು ನಿರ್ಮಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
 
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಪುಣ್ಯತಿಥಿ ಅಂಗವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
 
“ನೆಹರೂ ಅವರು ದೇಶ ಕಂಡ ಶ್ರೇಷ್ಠ ನಾಯಕ. ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ, ಆಗ ಎಲ್ಲವು ತನಗೆ ತಾನೇ ಮುಂದುವರಿಸಿಕೊಂಡು ಹೋಗುತ್ತದೆ. ಆಗ ದೇಶದ ಜನ ನಿನ್ನ ಜತೆ ಗುರುತಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಗಡಿಯಾರ ನೋಡಿ ಸಮಯ ಲೆಕ್ಕ ಹಾಕಬೇಡ, ನಿನಗೆ ಸಿಕ್ಕ ಸಮಯದಲ್ಲಿ ನೀನು ಏನು ಸಾಧನೆ ಮಾಡುತ್ತೀಯಾ ಎಂಬುದನ್ನು ಲೆಕ್ಕ ಹಾಕು ಎಂದು ನೆಹರೂ ಅವರು ಸಂದೇಶ ನೀಡಿದ್ದಾರೆ. ಅವರ ಕುಟುಂಬದ ಇತಿಹಾಸ, ಅವರ ಶ್ರೀಮಂತಿಕೆ ನಮಗೆ ತಿಳಿದಿದೆ. ಅಲಹಬಾದಿನಲ್ಲಿ ಅವರಿದ್ದ ಮನೆ ಜಮೀನು ಸುಮಾರು 30 ಎಕರೆ ಜಾಗ ಅದೆಲ್ಲವನ್ನು ಅವರು ಸರ್ಕಾರಕ್ಕೆ ಬರೆದಿಟ್ಟಿದ್ದಾರೆ. ಜತೆಗೆ ದೆಹಲಿ ಸೇರಿದಂತೆ ಇತರೆ ಆಸ್ತಿಗಳನ್ನು ದಾನ ಮಾಡಿದ್ದಾರೆ. ತಮ್ಮ ಆಸ್ತಿಗಳು ದೇಶದ ಸ್ವತ್ತು ಎಂದು ನಂಬಿದ್ದವರು ನೆಹರೂ ಅವರು. ಅಂತಹ ಕುಟುಂಬುದವರ ಮೇಲೆ ಬಿಜೆಪಿಯವರು ಅನೇಕ ಸುಳ್ಳು ಪ್ರಕರಣ ದಾಖಲಿಸಿದ್ದಾರೆ” ಎಂದು ತಿಳಿಸಿದರು.
 
“ನೆಹರೂ ಇಲ್ಲದೇ ಈ ದೇಶವಿಲ್ಲ. ಉದಾಹರಣೆಗೆ ನಮ್ಮ ರಾಜ್ಯವನ್ನೇ ತೆಗೆದುಕೊಳ್ಳಿ. ಇಲ್ಲಿರುವ ಬಿಹೆಚ್ಇಎಲ್, ಐಟಿಐ, ಹೆಚ್ಎಎಲ್, ಇಸ್ರೋ, ಬೆಮೆಲ್ ಸೇರಿದಂತೆ ಯಾವುದೇ ಸಾರ್ವಜನಿಕ ಸಂಸ್ಥೆ ತೆಗೆದುಕೊಂಡರೂ ಇವುಗಳನ್ನು ಸ್ಥಾಪಿಸಿದವರು ನೆಹರೂ ಅವರು. ಆಗಿನ ಕಾಲದಲ್ಲೇ ಬೆಂಗಳೂರಿನ ಮೇಲೆ ಅಪಾರವಾದ ನಂಬಿಕೆ ಹೊಂದಿದ್ದವರು ನೆಹರೂ. ಇನ್ನು ನಾವು ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತೇವೆ. ಅಂಬೇಡ್ಕರ್ ಅವರನ್ನು ಗುರುತಿಸಿ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿದ್ದು ನೆಹರೂ ಅವರು. ನಹೆರೂ ಅವರ ಜತೆ ಸಮಾಜದ ಎಲ್ಲಾ ವರ್ಗದ ಜನರು ಗುರುತಿಸಿಕೊಂಡಿದ್ದರು. ಈ ದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ಅವರ ಪಂಚವಾರ್ಷಿಕ ಯೋಜನೆ ನಮ್ಮ ದೇಶವನ್ನು ನಿರ್ಮಿಸಿದೆ. ಆಹಾರಕ್ಕೆ ಅಭಾವದಿಂದ ಕೂಡಿದ್ದ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡಿದ್ದು ನೆಹರೂ ಅವರು. ಹರಿಸು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಶೈಕ್ಷಣಿಕ ಕ್ರಾಂತಿ ಮಾಡಿದರು” ಎಂದು ತಿಳಿಸಿದರು.
 
“ಬಿಜೆಪಿಯವರು ಏನೇ ಟೀಕೆ ಮಾಡಿದರೂ ನಾವು ಈ ವಿಚಾರಗಳ ಮೂಲಕ ಅವರಿಗೆ ಪ್ರತ್ಯುತ್ತರ ನೀಡಬೇಕು. ಈ ದೇಶಕ್ಕೆ ನಾವು ಏನು ಮಾಡಿದ್ದೇವೆ, ಅವರು ಏನು ಮಾಡಿದ್ದಾರೆ ಎಂದು ಚರ್ಚೆ ಮಾಡಲಿ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಶೈಕ್ಷಣಿಕ ಹಕ್ಕು, ಮಾಹಿತಿ ಹಕ್ಕು, ಆಹಾರ ಹಕ್ಕು, ಉದ್ಯೋಗ ಖಾತರಿ, ಆಹಾರ ಭದ್ರತೆ, ಅರಣ್ಯ ಭೂಮಿ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಿದರು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಉಳುವವನಿಗೆ ಭೂಮಿ ಮೂಲಕ ರೈತರಿಗೆ ಶಕ್ತಿ ತುಂಬಲಾಯಿತು. ಕಾರ್ಮಿಕರಿಗೆ ಶಕ್ತಿ ತುಂಬುವ ಕಾಯ್ದೆ ತಂದಿದ್ದು ಕಾಂಗ್ರೆಸ್ ಸರ್ಕಾರಗಳು. ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ನೆಹರೂ ಅವರು. ಭಾರತೀಯ ವಿಮಾನಯಾನ ಆರಂಭಿಸಿದ್ದು, ದೊಡ್ಡ ನೀರಾವರಿ ಯೋಜನೆಗಳನ್ನು ಜಾರಿಗೆ ಮಾಡಿದ್ದು ನೆಹರೂ. ಅವರು ಹಾಕಿದ್ದ ಅಡಿಪಾಯದ ಮೇಲೆ ನಾವು ಈ ದೇಶವನ್ನು ನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಕೆಜಿಎಫ್ ಹೊರತಾಗಿ ಇತರೆ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆಗಳು ಆಗಿದ್ದರೆ ಅದು ನೆಹರೂ ಅವರ ದೂರದೃಷ್ಟಿಯ ಫಲ” ಎಂದು ಬಣ್ಣಿಸಿದರು.
 
“ನೆಹರೂ ಅವರ ವಿದೇಶಾಂಗ ನೀತಿ, ಬೇರೆ ದೇಶಗಳ ಜತೆಗಿನ ಸಂಬಂಧ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ನೆರೆಯ ಸಣ್ಣಪುಟ್ಟ ರಾಷ್ಟ್ರಗಳು ನಮ್ಮ ಜತೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ಪರಿಣಾಮ ನಮ್ಮ ಸುತ್ತ ಮುತ್ತ ವಿರೋಧಿಗಳೇ ತುಂಬಿದ್ದಾರೆ. ನೆಹರೂ ಅವರು ತಮ್ಮ ಅವಧಿಯಲ್ಲಿ ವಿದ್ಯಾಸಂಸ್ಥೆಗಳು, ಆಣೆಕಟ್ಟುಗಳನ್ನು ಕಟ್ಟಿದ್ದಾರೆ. ಆ ಮೂಲಕ ನಮ್ಮ ಆರ್ಥಿಕತೆಗೆ ಶಕ್ತಿ ತುಂಬಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯನ್ನು ರೂಪಿಸಿದರು. ನೆಹರೂ ಅವರ ಆಚಾರ ವಿಚಾರಗಳನ್ನು ನೀವೆಲ್ಲರೂ ಪ್ರಚಾರ ಮಾಡಬೇಕು” ಎಂದು ತಿಳಿಸಿದರು.
 
“ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮೊನ್ನೆ ರಾಹುಲ್ ಗಾಂಧಿ ಅವರು ನಮಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿಯು ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕು. ಜನಪರ ಆಡಳಿತ ಮಾಡುವುದು ನಮ್ಮ ಕೆಲಸ, ಅದನ್ನು ಜನರಿಗೆ ತಲುಪಿಸುವುದು ಕಾರ್ಯಕರ್ತರ ಕೆಲಸ. ಬುಧವಾರ  ಬೆಳಗ್ಗೆ 9 ಗಂಟೆಗೆ ಟೌನ್ ಹಾಲ್ ನಲ್ಲಿ ಜೈ ಹಿಂದ್ ಸಭೆಯನ್ನು ಕರೆಯಲಾಗಿದೆ. ಪಕ್ಷಾತೀತ ಕಾರ್ಯಕ್ರಮ ಇದಾಗಿದ್ದು, ಸಿಎಂ, ನಾನು, ವೇಣುಗೋಪಾಲ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ನಮನ ಸಲ್ಲಿಸಲಾಗುವುದು” ಎಂದು ತಿಳಿಸಿದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾರಿ ಶಕ್ತಿಯ ಚಿಹ್ನೆ ಸಿಂಧೂರ್‌: ಅಹಲ್ಯಾಬಾಯಿ ಹೋಳ್ಕರ್‌ಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

London viral video: ಈಕೆ ಕೈಯಲ್ಲಿ ಊಟ ಮಾಡಿದ್ದೇ ತಪ್ಪಾಯ್ತು, ಏನಾಗಿದೆ ವಿಡಿಯೋ ನೋಡಿ

ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ತೆರಿಗೆ ಹಣ ಬಳಕೆ: BY ವಿಜಯೇಂದ್ರ ಟೀಕೆ

Karkala: ಸಜೀವ ದಹನವಾದ ಕಂಬಳದ ಚಾಂಪಿಯನ್ ಕೋಣಗಳಿಗೆ ಒಡೆಯನ ಕಣ್ಣೀರ ವಿದಾಯ video

World No Tobbacco Day: ಆರೋಗ್ಯ ದೃಷ್ಟಿಯಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಸರ್ಕಾರ

ಮುಂದಿನ ಸುದ್ದಿ
Show comments