Select Your Language

Notifications

webdunia
webdunia
webdunia
webdunia

ಇದೊಂದು ವಿಚಾರದಲ್ಲಿ ತಾನು ಡಿಫರೆಂಟ್ ಎಂದು ಪ್ರೂವ್ ಮಾಡ್ತಿದ್ದಾರೆ ಡಿಕೆ ಶಿವಕುಮಾರ್

DK Shivakumar
Photo Credit: X
ಬೆಂಗಳೂರು: ಇದೊಂದು ವಿಚಾರದಲ್ಲಿ ತಾವು ಎಲ್ಲರಿಗಿಂತ ಭಿನ್ನ ಎಂದು ಸಿಎಂ ಡಿಕೆ ಶಿವಕುಮಾರ್ ನಿರೂಪಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಈ ಒಂದು ವರ್ತನೆ ವಿಪಕ್ಷಗಳನ್ನೂ ದಂಗಾಗಿಸುತ್ತಿದೆ.
 

ಪ್ರಮಾಣ ವಚನಕ್ಕೆ ಮುನ್ನ ಡಿಕೆ ಶಿವಕುಮಾರ್ ರಾಜ್ಯದ ಹಿರಿಯ ಮೂವರು ಸಿಎಂಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಬಂದಿದ್ದರು. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಖುದ್ದು ಭೇಟಿ ಮಾಡಿದ್ದರು.

ಇದು ಇಷ್ಟಕ್ಕೇ ನಿಂತಿಲ್ಲ. ಡಿಕೆ ಶಿವಕುಮಾರ್ ನಿನ್ನೆ ಮಾಜಿ ಸಿಎಂ ಡಿವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮನೆಗೂ ಭೇಟಿ ನೀಡಿದ್ದಾರೆ. ಈ ಮೂಲಕ ಈ ಮೊದಲೇ ಹೇಳಿದಂತೆ ಇನ್ನಷ್ಟು ಮಾಜಿ ಸಿಎಂಗಳ ಮನೆಗೆ ಭೇಟಿ ನೀಡಿ ಸಹಕಾರ ಕೋರಿದ್ದಾರೆ. ವಿಪಕ್ಷಗಳ ನಾಯಕರ ಮನೆಗೂ ಸೌಹಾರ್ದಯುತ ಭೇಟಿ ನೀಡುವ ಮೂಲಕ ಡಿಕೆ ಶಿವಕುಮಾರ್ ತಾವು ಎಲ್ಲರಿಗಿಂತ ಡಿಫರೆಂಟ್ ಎಂದು ಸಾಬೀತುಪಡಿಸುತ್ತಿದ್ದಾರೆ.

ಡಿಕೆಶಿ ವೇಗ ನೋಡಿದರೆ ಸ್ವಪಕ್ಷೀಯರಿಗೇ ಆತಂಕವಾಗಬಹುದು. ರಾಜಕೀಯದಲ್ಲಿ ಈ ರೀತಿ ಎದುರಾಳಿ ಪಕ್ಷದ ನಾಯಕರ ಮನೆಗೆ ಹೋಗಿ ಸೌಹಾರ್ದಯುತ ವರ್ತನೆ ತೋರುವುದು ಇತ್ತೀಚೆಗಿನ ದಿನಗಳಲ್ಲಿ ಅಪರೂಪವಾಗಿದೆ. ಇದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿ. ಆದರೆ ಡಿಕೆಶಿ ಈ ನಡೆ ಜನರ ಮನಸ್ಸಿಗೂ ಅಚ್ಚರಿಯುಂಟು ಮಾಡುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಸಂಪುಟದ ಎರಡನೇ ಲಿಸ್ಟ್ ನಲ್ಲಿ ಯಾರಿಗೆಲ್ಲಾ ಸಿಗಲಿದೆ ಮಂತ್ರಿಭಾಗ್ಯ: ಇಲ್ಲಿದೆ ಪಟ್ಟಿ