Webdunia - Bharat's app for daily news and videos

Install App

BJP ವಿರುದ್ಧ ದಿನೇಶ್​​​ ಗುಂಡೂರಾವ್​​​ ವಾಗ್ದಾಳಿ

Webdunia
ಸೋಮವಾರ, 10 ಅಕ್ಟೋಬರ್ 2022 (19:41 IST)
AICC ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೇಲಿರುವಷ್ಟು ಭಯ BJP ನಾಯಕರಿಗೆ ಬೇರೆ ಯಾರ ಮೇಲೂ ಇಲ್ಲ ಎಂದು 
KPCC ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿಯವರನ್ನು ಕೆಟ್ಟದಾಗಿ ಬಿಂಬಿಸಲು BJP ಕೋಟ್ಯಂತರ ಹಣ ವ್ಯಯಿಸುತ್ತಿರುವುದು ಅಕ್ಷರಶಃ ಸತ್ಯ. ಬಹುಶಃ ಬಿಜೆಪಿಯವರಿಗೆ ರಾಹುಲ್ ಗಾಂಧಿಯವರ ಮೇಲಿರುವ ಭಯ ಇನ್ಯಾರ ಮೇಲೂ ಇಲ್ಲ. ಆ ಭಯದಿಂದಲೇ, ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಬಿಜೆಪಿಯ ಟ್ರೋಲ್ ಪೇಜ್‌ಗಳು, ಫೇಕ್ ಫ್ಯಾಕ್ಟರಿಗಳು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿಯವರಷ್ಟು ನಿರಂತರ ಅಪಮಾನ ಹಾಗೂ ಸುಳ್ಳು ಆರೋಪಗಳಿಗೆ ಗುರಿಯಾದವರಿಲ್ಲ. ನೇರವಾದ ಮರಕ್ಕೆ ಕೊಡಲಿ ಪೆಟ್ಟು ಜಾಸ್ತಿ ಎಂಬಂತೆ, ರಾಹುಲ್‌ರವರ ನೇರವಂತಿಕೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಪ್ರೀತಿಯ ವ್ಯಕ್ತಿತ್ವ ಬಿಜೆಪಿಯವರ ನಿದ್ದೆಗೆಡಿಸಿದೆ. ದ್ವೇಷಕಾರುವ ಬಿಜೆಪಿಯವರಿಗೆ ಪ್ರೀತಿಯ ರಾಯಭಾರಿ ಆಗಿರುವ ರಾಹುಲ್ ಕಂಡರೆ ಹೆದರಿಕೆ ಸಹಜ ಎಂದು ಹೇಳಿದ್ದಾರೆ. BJPಯವರು ತಮ್ಮ ವಿರುದ್ದ ಎಷ್ಟೇ ಅಪಪ್ರಚಾರ ಮಾಡಿದರೂ, ಅದೆಷ್ಟೇ ಅಪಹಾಸ್ಯ ಮಾಡಿದರೂ ರಾಹುಲ್​​ ಗಾಂಧಿಯವರು ಎದೆಗುಂದಿಲ್ಲ ಎಂದು ತಿಳಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments