Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರದ ಪರ್ಸೆಂಟೇಜ್ ವ್ಯವಹಾರದ ಕುರಿತು ಆಘಾತಕಾರಿ ಡೀಟೇಲ್ಸ್ ಬಿಚ್ಚಿಟ್ಟ ದಿನೇಶ್ ಗುಂಡೂರಾವ್

ಕಾಂಗ್ರೆಸ್ ಸರ್ಕಾರದ ಪರ್ಸೆಂಟೇಜ್ ವ್ಯವಹಾರದ ಕುರಿತು ಆಘಾತಕಾರಿ ಡೀಟೇಲ್ಸ್ ಬಿಚ್ಚಿಟ್ಟ ದಿನೇಶ್ ಗುಂಡೂರಾವ್
ಬೆಂಗಳೂರು , ಗುರುವಾರ, 22 ಮಾರ್ಚ್ 2018 (07:12 IST)
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಪರ್ಸೆಂಟೇಜ್ ವ್ಯವಹಾರದ ಕುರಿತು ಆಘಾತಕಾರಿ ಡೀಟೇಲ್ಸ್ ಒಂದನ್ನು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಹಿರಂಗಪಡಿಸಿದ್ದಾರೆ.


ಕೆ.ಆರ್.ಪುರಂನಲ್ಲಿ ಕಾಂಗ್ರೆಸ್ ಪಾದಯಾತ್ರೆ ವೇಳೆ ಸಮಾರಂಭದಲ್ಲಿ ಭಾಷಣ ಮಾಡಿದ  ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ನ 50% ವ್ಯವಹಾರದ ಕುರಿತು ಸತ್ಯ ಬಿಚ್ಚಿಟ್ಟಿದ್ದಾರೆ. ಸಿಎಂ ಬಿಡುಗಡೆ ಮಾಡಿದ ಪ್ರಾಜೆಕ್ಟ್ ನಲ್ಲಿ ಮೂವರು ಶಾಸಕರಾದ ಭೈರತಿ ಬಸವರಾಜ್, ಸೋಮಶೇಖರ್ ಹಾಗೂ ಮುನಿರತ್ನ ಅವರಿಗೆ 50 ಪರ್ಸೆಂಟ್ ಎಂದು ಹೇಳಿಕೆ ನೀಡಿದ್ದಾರೆ.


ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ 7,500 ಕೋಟಿ ರೂ ಅನುದಾನ ನೀಡಿದ್ದ ರಲ್ಲಿ ದೊಡ್ಡ ಷೇರು ಸಿಎಂ ಆಪ್ತ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್ ಅವರಿಗೆ ಸಿಕ್ಕಿದೆ. ಮೂವರು ಕಾಂಗ್ರೆಸ್ ಶಾಸಕರಿಗೆ ಪ್ರಾಜೆಕ್ಟ್ ನಲ್ಲಿ ಶೇಕಡ 50ರಷ್ಟು ಸಿಕ್ಕಿರುವುದಾಗಿ ಮಾಜಿ ಸಚಿವ ಮತ್ತು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಆದರೆ ಇಷ್ಟೆಲ್ಲಾ ಹೇಳಿ ಕೊನೆಗೆ ತಾವು ಹೇಳಿದ್ದು ತಮಾಷೆಗೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ರಾಜ್ಯಸಭೆ ಚುನಾವಣೆ 2018: ಐವರು ಅಭ್ಯರ್ಥಿಗಳು ಕಣದಲ್ಲಿ