Select Your Language

Notifications

webdunia
webdunia
webdunia
webdunia

ಮೈತ್ರಿ ಸರ್ಕಾರದ ಸಂಪುಟ ಪುನಾರಚನೆಯ ಸುಳಿವು ನೀಡಿದ ದಿನೇಶ್‌ ಗುಂಡೂರಾವ್‌

ಮೈತ್ರಿ ಸರ್ಕಾರದ ಸಂಪುಟ ಪುನಾರಚನೆಯ ಸುಳಿವು ನೀಡಿದ ದಿನೇಶ್‌ ಗುಂಡೂರಾವ್‌
ಬೆಂಗಳೂರು , ಶುಕ್ರವಾರ, 7 ಜೂನ್ 2019 (13:05 IST)
ಬೆಂಗಳೂರು : ಕರ್ನಾಟಕ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮೈತ್ರಿ ಸರ್ಕಾರದ ಸಂಪುಟ ಪುನಾರಚನೆಯ ಕುರಿತಾದ ಸ್ಪೋಟಕ ಮಾಹಿತಿಯಂದನ್ನು ಬಹಿರಂಗಪಡಿಸಿದ್ದಾರೆ.




ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗರೆಡ್ಡಿ ನಮ್ಮ ಸಂಯೋಜಕ ಸಮಿತಿ ಅಧ್ಯಕ್ಷರು, ಅವರಿಗೆ ಖಂಡಿತ ಅವಕಾಶ ಸಿಗಲಿದೆ. ಅವರ ಜೊತೆ ಬೇರೆಯವರಿಗೂ ಅವಕಾಶ ಸಿಗಲಿದೆ. ವಿ.ಮುನಿಯಪ್ಪ, ಅಮರೇಗೌಡ ಬಯ್ಯಾಪುರ ಅವರಿಗೂ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿದೆ. ಅವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಶಿಸ್ತಿನಿಂದ ಇದ್ದಾರೆ ಎಂದು ಹೇಳಿದ್ದಾರೆ.


ಅಲ್ಲದೇ ಸಚಿವ ಸಂಪುಟ ವಿಸ್ತರಣೆಯಾ, ಪುನರಚನೆಯಾ ಗೊತ್ತಿಲ್ಲ ಆದರೆ ಸರಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳು ವಿಸ್ತರಣೆಯಾದ್ರೆ ಇಬ್ಬರಿಗೆ ಅವಕಾಶ ಸಿಗಲಿದೆ, ಪುನಾರಚನೆಯಾದರೆ ಪಕ್ಷದಲ್ಲಿ ಹಲವರಿಗೆ ಸ್ಥಾನ ಸಿಗಲಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನೀಡುತ್ತಾರೆಂಬ ವದಂತಿ ಹಿನ್ನಲೆ; ಸಂಪುಟ ಸಮಿತಿಯಲ್ಲಿ 6 ಸ್ಥಾನ ಪಡೆದ ರಾಜನಾಥ್ ಸಿಂಗ್