Select Your Language

Notifications

webdunia
webdunia
webdunia
webdunia

ದಿಡ್ಡಳ್ಳಿ ಆದಿವಾಸಿಗಳ ಪ್ರತಿಭಟನೆಗೆ ನಕ್ಸಲ್ ಬಣ್ಣ

ದಿಡ್ಡಳ್ಳಿ ಆದಿವಾಸಿಗಳ ಪ್ರತಿಭಟನೆಗೆ ನಕ್ಸಲ್ ಬಣ್ಣ
ಕೊಡಗು , ಬುಧವಾರ, 21 ಡಿಸೆಂಬರ್ 2016 (18:59 IST)
ಅರಣ್ಯ ತೆರವು ಕಾರ್ಯಾಚರಣೆಯ ವಿರುದ್ಧ ದಿಡ್ಡಳ್ಳಿಯಲ್ಲಿ ಗಿರಿಜನರು ಹಾಗೂ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಯಲ್ಲಿ ನಕ್ಸಲರು ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಅಪರಿಚಿತರ ಗುಂಪೊಂದು ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು ಎಂದು ಹೇಳಲಾಗುತ್ತಿದ್ದು, ಈ ವೇಳೆ ಸ್ಥಳೀಯರೊಂದಿಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಆದಿವಾಸಿಗಳ ಪ್ರತಿಭಟನೆಯಲ್ಲಿ ನಕ್ಸಲರು ಭಾಗಿಯಾಗಿದ್ದರು ಎನ್ನುವ ಶಂಕೆಯ ಮೇಲೆ ನಕ್ಸಲ್ ನಿಗ್ರಹದಳ ದಿಡ್ಡಳ್ಳಿಗೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದೆ. 
 
ನಮ್ಮ ಹೋರಾಟವನ್ನು ಹತ್ತಿಕ್ಕಲು ನಕ್ಸಲ್ ಬಣ್ಣ ನೀಡಿ ಗಮನ ಬೇರೆಡೆ ಸೆಳೆಯಲು ರಾಜ್ಯ ಸರಕಾರ ಯತ್ನಿಸುತ್ತಿದೆ ಎಂದು ಆದಿವಾಸಿಗಳ ಪರ ಹೋರಾಟರು ಆರೋಪಿಸಿದ್ದಾರೆ. 
 
ಆಶ್ರಯ ಕಳೆದುಕೊಂಡು ಬೀದಿಗೆ ಬಿದ್ದಿರುವ 577 ಆದಿವಾಸಿ ಕುಟುಂಬಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕುಟುಂಬಗಳಿಗೆ ವಸತಿ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪನವರ ಭವಿಷ್ಯ ಜೋತಿಷ್ಯದ ಮೇಲೆ ನಿಂತಿದೆ: ಸಚಿವ ಜಯಚಂದ್ರ