Select Your Language

Notifications

webdunia
webdunia
webdunia
webdunia

ಐಟಿ ದಾಳಿ ವಿಷ್ಯಕ್ಕೆ ಹೊರಟ್ಟಿ ಹೀಗ್ಯಾಕೆ ಹೇಳಿದ್ರು?

ಐಟಿ ದಾಳಿ ವಿಷ್ಯಕ್ಕೆ ಹೊರಟ್ಟಿ ಹೀಗ್ಯಾಕೆ ಹೇಳಿದ್ರು?
ಹುಬ್ಬಳ್ಳಿ , ಶುಕ್ರವಾರ, 29 ಮಾರ್ಚ್ 2019 (13:52 IST)
ಸಿಎಂ ಆಪ್ತರ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಎಂಎಲ್ ಸಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದು, ಐಟಿ ದಾಳಿ ರಾಜಕೀಯ ಪ್ರೇರಿತವಾಗಿದೆ.

ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಐಟಿ ದಾಳಿ ಮಾಡುವುದು ಇನ್ನೊಬ್ಬರನ್ನ ಕಟ್ಟಿ ಹಾಕಲು ಅದಕ್ಕಾಗಿಯೇ ಐಟಿ ದಾಳಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಕೈಯಲ್ಲಿ ಐಟಿ ಇದೆ. ಕೇಂದ್ರ ಸರ್ಕಾರ ತಮಗೆ ಹೇಗೆ ಬೇಕು ಹಾಗೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ದೂರಿದ್ರು.

ಈ ಟೈಮ್‌ನಲ್ಲಿ ದಾಳಿ ಮಾಡುವದರಿಂದ ಎಲ್ಲ ಜನರಿಗೆ ಗೊತ್ತಾಗುತ್ತೆ ಇದು ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂದು. ಐಟಿ ದಾಳಿ ಮಾಡಬೇಕಾದ್ರೆ ಈ ಹಿಂದೆ ಮಾಡಬೇಕಾಗಿತ್ತು, ಚುನಾವಣೆ ಹೊತ್ತಿನಲ್ಲಿ ಮಾಡುವುದು ಸರಿಯಲ್ಲ.

ಕೇಂದ್ರ ಸರ್ಕಾರ ಈಗ ಐಟಿ, ಮುಂದೆ ಸಿಬಿಐಯನ್ನ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ಆರೋಪ ಮಾಡಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಎಂಪಿ ಟಿಕೆಟ್ ಶಾಮನೂರುಗೆ ಬೇಡ್ವೇ ಬೇಡಂತೆ