ಆತ್ಮಹತ್ಯೆ ಮಾಡಿಕೊಂಡ್ರಾ BMTC ಕಂಡಕ್ಟರ್​​?

Webdunia
ಗುರುವಾರ, 23 ಮಾರ್ಚ್ 2023 (14:00 IST)
BMTC ಬಸ್​ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಇದು ಸಹಜ ಸಾವಲ್ಲ ಆತ್ಮಹತ್ಯೆ ಎಂಬುದಕ್ಕೆ ಕೆಲ ಸಾಕ್ಷ್ಯಗಳು ದೊರೆತಿವೆ. ಆದರೆ ನಿಖರವಾಗಿ ಆತ್ಮಹತ್ಯೆ ಎಂದು ಸಾಬೀತಾಗಿಲ್ಲ. ಬೆಂಗಳೂರಿನಲ್ಲಿ BMTC ಕಂಡಕ್ಟರ್ ಮುತ್ತಯ್ಯ ಬಸ್​ ನಿಲ್ದಾಣದಲ್ಲಿ ಮಲಗಿದ್ದಾಗ ಬಸ್​ ಬೆಂಕಿಗಾಹುತಿಯಾಗಿದ್ದು, ಮುತ್ತಯ ಸಜೀವ ದಹನಗೊಂಡಿದ್ರು. ಇವರು ಬಸ್​​​​ ನಿಲ್ಲಿಸಿದ ಬಳಿಕ ಹೊರಗೆ ಹೋಗಿ ಬಂದಿದ್ದಾರೆ.. ಮುತ್ತಯ UPI ಬಳಸಿ ಹತ್ತಿರ ಪೆಟ್ರೋಲ್​ ಬಂಕ್​​ನಿಂದ ಪೆಟ್ರೋಲ್​​​ ಮತ್ತು ಡೀಸೆಲ್​​ ಖರೀದಿಸಿದ್ದಾರೆ. 700 ರೂವನ್ನು ತನ್ನ UPI ಬಳಸಿ ಪೆಟ್ರೋಲ್​, ಡೀಸೆಲ್​ ಖರೀದಿಸಿದ್ದಾರೆ. ಬಳಿಕ ಬಸ್​​​ ನಿಲ್ದಾಣಕ್ಕೆ ಬಂದು ಡ್ರೈವರ್ ಪ್ರಕಾಶ್​​​ನನ್ನು ಬಸ್​​​ನಿಂದ ಹೊರಗೆ ಮಲಗುವಂತೆ ಸೂಚಿಸಿದ್ದಾರೆ. ಬಸ್​​​ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಮಾಡಲಾಗಿದೆ. ಬಳಿಕ ಇವರು ಬಸ್​​​ನ ಒಳಗೆ ಮಲಗಿ ನಿದ್ರಿಸಿದ್ದಾರೆ. ಇವೆಲ್ಲಾ ಅಂಶಗಳನ್ನು ಪರಿಗಣಿಸಿದಾಗ ಇದು ಸಹಜ ಸಾವಲ್ಲ ಪೆಟ್ರೋಲ್​​, ಡೀಸೆಲ್​ ಬಳಸಿ ಬಸ್​​​ಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರ ಎಂದು ಶಂಕಿಸಲಾಗಿದೆ. ಸದ್ಯ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, FSL ರಿಪೋರ್ಟ್​ ಬಂದ ಬಳಿಕ ಬೆಂಕಿ ಹತ್ತಿಕೊಂಡಿದ್ದು ಹೇಗೆ ಎಂದು ತಿಳಿಯಬೇಕಿದೆ. ಕಂಡಕ್ಟರ್​​​ ಮುತ್ತ ಹಣಕಾಸು ತೊಂದರೆಗೆ ಸಿಲುಕಿದ್ರು ಎಂದು ಹೇಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮನರೇಗಾ ವಿಚಾರದಲ್ಲಿ ಚರ್ಚೆಗೆ ಆಹ್ವಾನಿಸಿದ ಎಚ್‌ಡಿಕೆಗೆ ಶಿವಕುಮಾರ್ ತಿರುಗೇಟು

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕರ ವಿಚಾರ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ

ಬಾಂಗ್ಲಾದೇಶ: ಶರಿಯತ್‌ಪುರ ಬಾಂಬ್ ಸ್ಫೋಟದಲ್ಲಿ ಸಾವಿನ ಸಂಖ್ಯೆ 2ಕ್ಕೆ ಏರಿಕೆ

ಜಮೀನಿನಲ್ಲಿ ಸಿಕ್ಕ ನಿಧಿ ಸರ್ಕಾರಕ್ಕೆ ನೀಡಿ ಪ್ರಾಮಾಣಿಕತೆ ಮೆರೆದು ಬೀದಿಗೆ ಬಿದ್ದ ಕುಟುಂಬ: ಯಾಕೆ ಹೀಗಾಯ್ತು

ಮುಟ್ಟಿನ ಕಾಲದ ನೋವು ತಾಳಲಾರದೆ ನೇಣಿಗೆ ಶರಣಾದ ಯುವತಿ

ಮುಂದಿನ ಸುದ್ದಿ
Show comments