Webdunia - Bharat's app for daily news and videos

Install App

ಆತ್ಮಹತ್ಯೆ ಮಾಡಿಕೊಂಡ್ರಾ BMTC ಕಂಡಕ್ಟರ್​​?

Webdunia
ಗುರುವಾರ, 23 ಮಾರ್ಚ್ 2023 (14:00 IST)
BMTC ಬಸ್​ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಇದು ಸಹಜ ಸಾವಲ್ಲ ಆತ್ಮಹತ್ಯೆ ಎಂಬುದಕ್ಕೆ ಕೆಲ ಸಾಕ್ಷ್ಯಗಳು ದೊರೆತಿವೆ. ಆದರೆ ನಿಖರವಾಗಿ ಆತ್ಮಹತ್ಯೆ ಎಂದು ಸಾಬೀತಾಗಿಲ್ಲ. ಬೆಂಗಳೂರಿನಲ್ಲಿ BMTC ಕಂಡಕ್ಟರ್ ಮುತ್ತಯ್ಯ ಬಸ್​ ನಿಲ್ದಾಣದಲ್ಲಿ ಮಲಗಿದ್ದಾಗ ಬಸ್​ ಬೆಂಕಿಗಾಹುತಿಯಾಗಿದ್ದು, ಮುತ್ತಯ ಸಜೀವ ದಹನಗೊಂಡಿದ್ರು. ಇವರು ಬಸ್​​​​ ನಿಲ್ಲಿಸಿದ ಬಳಿಕ ಹೊರಗೆ ಹೋಗಿ ಬಂದಿದ್ದಾರೆ.. ಮುತ್ತಯ UPI ಬಳಸಿ ಹತ್ತಿರ ಪೆಟ್ರೋಲ್​ ಬಂಕ್​​ನಿಂದ ಪೆಟ್ರೋಲ್​​​ ಮತ್ತು ಡೀಸೆಲ್​​ ಖರೀದಿಸಿದ್ದಾರೆ. 700 ರೂವನ್ನು ತನ್ನ UPI ಬಳಸಿ ಪೆಟ್ರೋಲ್​, ಡೀಸೆಲ್​ ಖರೀದಿಸಿದ್ದಾರೆ. ಬಳಿಕ ಬಸ್​​​ ನಿಲ್ದಾಣಕ್ಕೆ ಬಂದು ಡ್ರೈವರ್ ಪ್ರಕಾಶ್​​​ನನ್ನು ಬಸ್​​​ನಿಂದ ಹೊರಗೆ ಮಲಗುವಂತೆ ಸೂಚಿಸಿದ್ದಾರೆ. ಬಸ್​​​ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಮಾಡಲಾಗಿದೆ. ಬಳಿಕ ಇವರು ಬಸ್​​​ನ ಒಳಗೆ ಮಲಗಿ ನಿದ್ರಿಸಿದ್ದಾರೆ. ಇವೆಲ್ಲಾ ಅಂಶಗಳನ್ನು ಪರಿಗಣಿಸಿದಾಗ ಇದು ಸಹಜ ಸಾವಲ್ಲ ಪೆಟ್ರೋಲ್​​, ಡೀಸೆಲ್​ ಬಳಸಿ ಬಸ್​​​ಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರ ಎಂದು ಶಂಕಿಸಲಾಗಿದೆ. ಸದ್ಯ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, FSL ರಿಪೋರ್ಟ್​ ಬಂದ ಬಳಿಕ ಬೆಂಕಿ ಹತ್ತಿಕೊಂಡಿದ್ದು ಹೇಗೆ ಎಂದು ತಿಳಿಯಬೇಕಿದೆ. ಕಂಡಕ್ಟರ್​​​ ಮುತ್ತ ಹಣಕಾಸು ತೊಂದರೆಗೆ ಸಿಲುಕಿದ್ರು ಎಂದು ಹೇಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments