Publish Date: Sun, 25 Jun 2023 (13:34 IST)
Updated Date: Sun, 25 Jun 2023 (13:39 IST)
ಗ್ರೀನ್ ಪೀಸ್ ಸಂಸ್ಥೆಯಿಂದ ಸಂವಾದ ಆಯೋಜನೆ ನಗರದ ಒ್ರೆಸ್ ಕ್ಲಬ್ ನಲ್ಲಿ ಆಯೋಜನೆ ಮಾಡಿದ್ದು,ಲೆಟ್ಸ್ ಮೂವ್ ಬೆಂಗಳೂರು ಹೆಸರಲ್ಲಿ ಸಂವಾದ ನಡೆಯುತ್ತಿದೆ.ಸರ್ಕಾರಿ ಅಧಿಕಾರಿಗಳು,ಸಾರಿಗೆ ತಜ್ಞರಿಂದ ಚರ್ಚೆ ನಡೆಯುತ್ತಿದೆ.ಫ್ರೀ ಬಸ್ ಯೋಜನೆಯ ಸಾಧ್ಯಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು,ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗ್ರೀನ್ ಪೀಸ್ ಇಂಡಿಯಾದಿಂದ ಫ್ರೀ ಬಸ್ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸರ್ಕಾರದ ಶಕ್ತಿ ಯೋಜನೆ ಕುರಿತು ನಾಗರೀಕರ ಜೊತೆ ಸಂವಾದ ನಡೆಸುತ್ತಿದ್ದು, ಶಕ್ತಿ ಯೋಜನೆಯ ಬಳಕೆ,ಅದರ ಪರಿಣಾಮ ಕುರಿತು ಅಪಾರ್ಟ್ ಮೆಂಟ್ ಫೆಡರೇಶನ್,ಸ್ಲಂ ನಿವಾಸಿಗಳ ಒಕ್ಕೂಟ, ಸಿಟಿಜನ್ ಫಾರ್ ಸ್ಯಾಂಕಿ ಸೇರಿ ಹಲವು ಒಕ್ಕೂಟಗಳ ಸದಸ್ಯರು ಭಾಗಿಯಾಗಿದ್ದಾರೆ.Sustainable Transportation Lab ನ ಫ್ರೊಫೆಸರ್ ಆಶಿಶ್ ವರ್ಮಾ, ಶ್ರೀನಿವಾಸ ಮನವಳ್ಳಿ ,ಅಮೃತ ನಾಯರ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.