Select Your Language

Notifications

webdunia
webdunia
webdunia
webdunia

ಧರ್ಮಸ್ಥಳ: 6 ಅಡಿ ಅಗೆದರೂ ಸಿಗದ ಕಳೆಬರಹ, ಕಾರ್ಯಚರಣೆಯಲ್ಲಿ ಬಿಗ್‌ಟ್ವಿಸ್ಟ್‌

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ

Sampriya

ಮಂಗಳೂರು , ಬುಧವಾರ, 30 ಜುಲೈ 2025 (14:27 IST)
ಮಂಗಳೂರು: ಧರ್ಮಸ್ಥಳ ಹಲವು ಸ್ಥಳಗಳಲ್ಲಿ ಹೂತಿಟ್ಟ ಪ್ರಕರಣ ಸಂಬಂಧ ಶವಗಳಿಗಾಗಿ ಎಸ್‌ಐಟಿ ಪೊಲೀಸರು ನಿನ್ನೆಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. 

ಸಾಕ್ಷಿ ದೂರುದಾರ ಗುರುತಿಸಿದ ಎರಡು ಸ್ಥಳಗಳಲ್ಲೂ ಈಗಾಗಲೇ ಶೋಧ ಕಾರ್ಯ ಅಂತ್ಯಗೊಂಡಿದೆ. ಆದರೆ ಯಾವುದೇ ಕಳೆಬರಹೆಗಳು ಸಿಕ್ಕಿಲ್ಲ, ಇದೀಗ ದಟ್ಟ ಕಾನನದ ಒಳಗಡೆ ಮೂರನೇ ಪಾಯಿಂಟ್ಸ್‌ನಲ್ಲು ಶೋಧಕಾರ್ಯ ಆರಂಭಿಸಲಿದ್ದಾರೆ. 

ಈ ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ತೋರಿಸಿದ್ದ ಎರಡನೇ ಜಾಗವನ್ನು ಅಗೆಯುವ ಕಾರ್ಯ ಆರಂಭವಾಗಿದೆ. 

ಅಧಿಕಾರಿಗಳು ಹಾಗೂ ಸಿಬ್ಬಂದಿ ತಲುಪುವುದಕ್ಕೆ ಹರಸಾಹಸ ಪಡಬೇಕಾದ ಈ ಜಾಗಕ್ಕೆ ನೆಲ ಅಗೆಯುವ ಯಂತ್ರವನ್ನು ಒಯ್ಯುವುದು ಕಷ್ಟಸಾಧ್ಯ. ಹಾಗಾಗಿ ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡೇ ಅಗೆಯಲು ವಿಶೇಷ ತನಿಖಾ ತಂಡ (ಎಸ್ಐಟಿ) ನಿರ್ಧರಿಸಿದೆ.

ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗವು ನೇತ್ರಾವತಿ ನದಿಯ ಪಕ್ಕದಲ್ಲೇ ಇತ್ತು. ಆ ಜಾಗದಲ್ಲಿ ಮಂಗಳವಾರ ಸುಮಾರು 8 ಅಡಿಗಳಷ್ಟು ಆಳಕ್ಕೆ ಅಗೆದಾಗಲೂ ಮೃತದೇಹಗಳನ್ನು ಹುಗಿದ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ