Webdunia - Bharat's app for daily news and videos

Install App

ಕಾಲು ತೊಳೆಯಲು ಹೋದ ಭಕ್ತ ನೀರು ಪಾಲು!

Webdunia
ಶನಿವಾರ, 15 ಅಕ್ಟೋಬರ್ 2022 (20:44 IST)
ತಿರುಪತಿಯ ತಿರುಮಲ ಪಾದಯಾತ್ರೆಗೆ ಹೊರಟ ಭಕ್ತರೊಬ್ಬರು ಶೌಚಕ್ಕೆ ಹೋಗಿ ಕಾಲು ತೊಳೆಯಲು ಕೃಷಿ ಹೊಂಡಕ್ಕೆ ಹೋದ ವ್ಯಕ್ತಿ ಕಾಲು ಜಾರಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಶೀಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
 
 ಶಿಡ್ಲಘಟ್ಟ ತಾಲೂಕು ಹೊರವಲಯದ ಕೈವಾರ ಹೋಬಳಿ ಜಂಗಮಶೀಗೆಹಳ್ಳಿ ಗ್ರಾಮದ ಬಳಿ ಕೃಷಿಹೊಂಡಕ್ಕೆ ಇಳಿದ ಭಕ್ತರೊಬ್ಬರು ಅಕಸ್ಮಿಕವಾಗಿ ಕಾಲು ಜಾರಿಬಿದ್ದು ಕೃಷಿ ಹೊಂಡದ ಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಮೃತ ವ್ಯಕ್ತಿಯನ್ನು ಮಂಡ್ಯ ತಾಲ್ಲೂಕು ಗೌಡನಗೆರೆ ಗ್ರಾಮದ ಚಿಲ್ಲರೆ ಅಂಗಡಿ ವ್ಯಾಪಾರಿ ೪೬ವರ್ಷದ ಶಂಕರ್ ಎಂದು ಗುರುತಿಸಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮಂಡ್ಯ, ಕುಣಿಗಲ್ ಮತ್ತಿತರ ಕಡೆಯಿಂದ ಸುಮಾರು ೨೫೦೦ಕ್ಕೂ ಹೆಚ್ಚು ಭಕ್ತರು ತಿರುಪತಿ ತಿರುಮಲ ಪಾದಯಾತ್ರೆ ಕೈಗೊಂಡಿದ್ದು ಆ ಪಾದಯಾತ್ರೆಯಲ್ಲಿ ಶಂಕರ್ ಸಹ ಭಾಗವಹಿಸಿದ್ದರು.
 
ಸುಮಾರು ೫-೩೦ರ ಸಮಯದಲ್ಲಿ ಮೂರು ಮಂದಿ ಸ್ನೇಹಿತರ ಜೊತೆ ಶೌಚಕ್ಕೆ ಹೋದ ಶಂಕರ್ ಕಾಲು ತೊಳೆದುಕೊಳ್ಳಲು ಕೃಷಿಹೊಂಡಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ನೀರಿನೊಳಕ್ಕೆ ಬಿದ್ದ ಶಬ್ದ ಕೇಳಿಸಿಕೊಂಡು ಜೊತೆಯಲ್ಲಿದ್ದ ಸ್ನೇಹಿತರು ಓಡಿ ಬಂದಿದ್ದಾರೆ ಕತ್ತಲಿನಲ್ಲಿ ಹೊಂಡ ಸರಿಯಾಗಿ ಕಾಣದ ಪರಿಣಾಮ ಕೂಗಿಕೊಂಡಿದ್ದಾರೆ.ಕೃಷಿ ಹೊಂಡದ  ಸ್ವಲ್ಪ ದೂರದಲ್ಲಿರುವ ಗ್ರಾಮಸ್ಥರು ಬರುವ ವೇಳೆಗೆ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments