Select Your Language

Notifications

webdunia
webdunia
webdunia
webdunia

ದಲಿತ ಸಂಸದನಿಗೆ ಪ್ರವೇಶ ನಿರಾಕರಣೆ: ಈ ಸ್ವಾಮೀಜಿ ಮಾಡಿದ್ದು ಅದ್ಭುತ

ದಲಿತ ಸಂಸದನಿಗೆ ಪ್ರವೇಶ ನಿರಾಕರಣೆ: ಈ ಸ್ವಾಮೀಜಿ ಮಾಡಿದ್ದು ಅದ್ಭುತ
ಚಿತ್ರದುರ್ಗ , ಶುಕ್ರವಾರ, 20 ಸೆಪ್ಟಂಬರ್ 2019 (22:51 IST)
ಬಿಜೆಪಿ ಸಂಸದರೊಬ್ಬರು ದಲಿತ ಅನ್ನೋ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶ ನೀಡದ ಗ್ರಾಮಕ್ಕೆ ಈ ಸ್ವಾಮೀಜಿ ತೆರಳುತ್ತಿದ್ದಾರೆ.

ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿಗೆ ಪಾವಗಡ ತಾಲೂಕಿನ ಪಮ್ಮೆನಳ್ಳಿ ಗ್ರಾಮದ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಿಸಲಾಗಿತ್ತು. ಗ್ರಾಮದ ಹೊರಗಡೆ ಕಾದು ಕುಳಿತು ಅಧಿಕಾರಿಗಳು ವಾಪಸ್ಸಾದ ನಂತ್ರ ಸಂಸದ್ರು ವಾಪಸ್ಸಾಗಿದ್ದರು.

ಮೂಢ ನಂಬಿಕೆ ವಿರುದ್ಧ ಸದಾ ಹೋರಾಟ ಮಾಡುತ್ತಾ ಬಂದಿರೋ ಮುರುಘಮಠದ  ಮುರುಘ ಶರಣರು ಎರಡೂ ಸಮುದಾಯದ ಮುಖಂಡರನ್ನು ಒಂದುಗೂಡಿಸಿ ಸಾಮರಸ್ಯಸ ಸಾಧಿಸುವ ನಿಟ್ಟಿನಲ್ಲಿ  ಬಾನುವಾರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ .

ಕಾಡುಗೊಲ್ಲ ಸಮುದಾಯದದಲ್ಲಿ ಇನ್ನೂ ಜೀವಂತವಾಗಿರೋ ಮೂಢ ನಂಬಿಕೆಗಳನ್ನ ತೊಲಗಿಸ ಬೇಕಾಗಿದೆ. ಅದಕ್ಕಾಗಿ  ಉಭಯ ಸಮುದಾಯದಗಳ ಸಹಕಾರದೊಂದಿಗೆ ನಮ್ಮ ನಡಿಗೆ ಸೌಹಾರ್ದತೆ ಕಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಅಂತ ಚಿತ್ರದುರ್ಗದ ಮುರುಘ ಶರಣರು ಚಿತ್ರದುರ್ಗದ ಶ್ರಿ ಮಠದಲ್ಲಿ ಹೇಳಿಕೆ ನೀಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಸಂತೆಯಲ್ಲಿ ವ್ಯಾಪಾರ ಭರ್ಜರಿಯೋ ಭರ್ಜರಿ