Webdunia - Bharat's app for daily news and videos

Install App

ಟ್ರಾನ್ಸ್ ಜೆಂಡರ್ ಬಿಲ್ ‌‌ ಹಿಂಪಡೆಯಲು ಮಂಗಳಮುಖಿಯರ ಆಗ್ರಹ

Webdunia
ಮಂಗಳವಾರ, 1 ಜನವರಿ 2019 (16:00 IST)
ಟ್ರಾನ್ಸ್ ಜೆಂಡರ್ ಬಿಲ್ ನ್ನು‌‌ ಹಿಂಪಡೆಯುವಂತೆ ಒತ್ತಾಯಿಸಿ ಮಂಗಳಮುಖಿಯರು ‌ಪ್ರತಿಭಟನೆ ನಡೆಸಿದ್ದಾರೆ.

ಹುಬ್ಬಳ್ಳಿ ನಗರದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಂಗಳಮುಖಿಯರು ಕೇಂದ್ರ  ಸರಕಾರದ ವಿರುದ್ಧ ಘೋಷಣೆ ಕೂಗಿ‌ ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ಟ್ರಾನ್ಸ್ ಜೆಂಡರ್ ಬಿಲ್‌ ನ್ನು 27 ತಿದ್ದುಪಡಿ ಸಮೇತ ಅನುಮೋದನೆ ನೀಡಲಾಗಿದೆ. ಈ ಬಿಲ್ ಮಾನವ ಕಳ್ಳ ಸಾಗಾಣೆ ಸೇರಿದಂತೆ ಹಲವು ನಿಬಂಧನೆಗೆ ಒಳಪಟ್ಟಿದ್ದು, ಭಾರತದ ಸಂವಿಧಾನ ಸಿದ್ದಾಂತಕ್ಕೆ ವಿರುದ್ಧವಾಗಿದೆ. ಈಗಾಗಲೇ ಭಾರತೀಯ ದಂಡ ಸಂಹಿತೆ ಸೆಕ್ಷನ್ 379 ಹಾಗೂ 370 ಎ ಅಡಿಯಲ್ಲಿ ಮಾನವ ಕಳ್ಳಸಾಗಾಣೆ ಹಾಗೂ ಲೈಂಗಿಕ ದುರ್ಬಳಕೆ  ಮಾಡಿಕೊಳ್ಳುವದಕ್ಕೆ ಶಿಕ್ಷೆ ಇದ್ದು ಈ ಬಿಲ್ ಅನಾವಶ್ಯಕವಾಗಿದೆ. 

ಹೀಗಾಗಿ ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಬಿಲ್ 2018 ನ್ನು ಮತ್ತೊಮ್ಮೆ ಕೂಲಂಕುಶವಾಗಿ ಪರಿಶೀಲಿಸಿ ಸುಪ್ರೀಂಕೋರ್ಟ್ ತೀರ್ಪಿಗೆ ಪೂರಕವಾಗಿ ಹಾಗೂ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಟ್ರಾನ್ಸ್ ಜೆಂಡರ್ ಸಮುದಾಯವು ನೀಡಿರುವ ಅಭಿಪ್ರಾಯ ಒಳಗೊಂಡಿರುವಂತೆ ಮತ್ತೊಮ್ಮೆ ಟ್ರಾನ್ಸ್ ಬಿಲ್ ನ್ನು ಮಂಡಿಸಬೇಕು ಎಂದು ಒತ್ತಾಯಿಸಿದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ