Select Your Language

Notifications

webdunia
webdunia
webdunia
webdunia

ಸಿನಿಮೀಯ ರೀತಿಯಲ್ಲಿ ನಡೆದ ಕೊಲೆಗೆ ಸಿನಿಮೀಯ ರೀತಿಯಲ್ಲೇ ಎಂಡ್!

ಸಿನಿಮೀಯ ರೀತಿಯಲ್ಲಿ ನಡೆದ ಕೊಲೆಗೆ ಸಿನಿಮೀಯ ರೀತಿಯಲ್ಲೇ ಎಂಡ್!
ಮಂಗಳೂರು , ಗುರುವಾರ, 4 ಜನವರಿ 2018 (08:34 IST)
ಮಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್ ರನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಕಾಟಿಪ್ಪಳ್ಳ ಸಮೀಪ ಭೀಕರವಾಗಿ ಕೊಲೆ ಮಾಡಿದ್ದರು. ಇದೀಗ ನಾಲ್ವರು ದುಷ್ಕರ್ಮಿಗಳನ್ನೂ ಪೊಲೀಸರು ಸಿನಿಮೀಯ ರೀತಿಯಲ್ಲೇ ಸೆರೆ ಹಿಡಿದಿದ್ದಾರೆ.
 

ಹತ್ಯೆ ನಡೆದ ಕೇವಲ ಮೂರು ಗಂಟೆಯೊಳಗೆ ಪೊಲೀಸರು ಹಂತಕ ಜಾಡು ಹಿಡಿದು ಅವರು ಪ್ರಯಾಣಿಸುತ್ತಿದ್ದ ಕಾರನ್ನು 27 ಕಿ.ಮೀ. ದೂರ ಬೆಂಬಿಡದೇ ಚೇಸ್ ಮಾಡಿ ಕೊನೆಗೆ ಕಾರಿಗೆ ಗುಂಡಿನ ಸುರಿಮಳೆಗೈದು ನಾಲ್ವರನ್ನೂ ಸೆರೆ ಹಿಡಿದಿದ್ದಾರೆ.

ಪೊಲೀಸರ ಈ ತ್ವರಿತ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಈ ನಾಲ್ವರ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಶೀಘ್ರವೇ ಆರೋಪಿಗಳನ್ನು ಬಂಧಿಸಿ ಪೊಲೀಸರು ಟೀಕೆಗಳಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕವಾಗಿ ಉತ್ತೇಜನಗೊಂಡು ಪತ್ನಿ ಪತಿಗೆ ಕಚ್ಚಿದ್ದೆಲ್ಲಿ ಗೊತ್ತಾ…?