Webdunia - Bharat's app for daily news and videos

Install App

ಯೋಗಸೆಂಟರ್ ಗಾಗಿ ಮರಗಳ‌ ಮಾರಣಹೋಮ..!

Webdunia
ಭಾನುವಾರ, 30 ಏಪ್ರಿಲ್ 2023 (17:00 IST)
ರಾಜಧಾನಿಯ ರಾಜರಾಜೇಶ್ವರಿ ನಗರದ ಕೆರೆಯನ್ನ ಈಗಾಗಲೇ ಒತ್ತುವರಿ ಮಾಡಿಕೊಂಡು, ಕೆರೆಯ ಜಾಗವೇ ಇಲ್ಲದಂತೆ ಮಾಡಲಾಗಿದೆ. ಇನ್ನು ಈ ಕೆರೆ ಜಾಗದ ಒಳಗೆ ಬಿಬಿಎಂಪಿ ಯೋಗಸೆಂಟರ್ ಮಾಡಲು ಹೊರಟಿದದ್ದು, 15 ಕ್ಕೂ ಹೆಚ್ಚು ಮರಗಳನ್ನ ಕಡಿಯಲಾಗಿದೆ. ಕೆರೆಯ ಜಾಗದಲ್ಲಿ ಯಾಕಪ್ಪಾ ಯೋಗಸೆಂಟರ್ ಅಂತಾ ಅಲ್ಲಿನ ಸ್ಥಳೀಯರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.  ಈ ಕೆರೆ ಒಳಗಿನ ಜಾಗದಲ್ಲಿ ಯೋಗಸೆಂಟರ್ ನಿರ್ಮಾಣ ಮಾಡ್ಬೇಕು ಅಂತಾ  ಮರಗಳನ್ನು ಕಡಿದು ಹಾಕಿ, ಜಾಗ ಮಾರ್ಕ್ ಮಾಡಿ ಹೋಗಲಾಗಿದೆ.‌ ಇದು ಈಗ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
 
 
ಈ ಕರೆಯನ್ನು ಈಗಾಗಲೇ ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಇದೆ. ಹೀಗಾಗೀ ಕೆರೆ ಜಾಗ ಕ್ಷೀಣಿಸಿದ್ದು, ಪಕ್ಷಿ-ಪ್ರಾಣಿ ಸಂಕುಲ ನಾಶವಾಗಿದೆ. ಇದ್ರ ನಡುವೆ ಈಗ ಪಾಲಿಕೆ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದು, ಕೆರೆ ಜಾಗದಲ್ಲಿ ಯೋಗಸೆಂಟರ್ ನಿರ್ಮಾಣ ಮಾಡೋಕೆ ಹೊರಟಿದೆ. ಈ ಕೆರೆಯ ಜಾಗದಲ್ಲಿ ವಾಕಿಂಗ್ ಮಾಡಿದ್ರೆ ಸಾಕು,ಅದೇ ಯೋಗ ಆಗುತ್ತೆ. ಮತ್ಯಾಕೆ ಯೋಗಸೆಂಟರ್ ಬೇಕು ಅನ್ನೋದು ಸ್ಥಳೀಯರ ಆಕ್ಷೇಪ. ಇನ್ನು ಒಂದು ಮರ ಬೆಳೆಸೋದು ಎಷ್ಟು ಕಷ್ಟ. ಅಂತದ್ರಲ್ಲಿ ಸ್ಥಳೀಯರು ಬಹುದಿನಗಳಿಂದ ಬೆಳೆಸಿರೋ ಮರಗಳನ್ನು ಜೆಸಿಬಿ ತಂದು ಕ್ಷಣಾರ್ಧದಲ್ಲಿ ನಾಶ ಮಾಡ್ತಾರೆ ಅಂದ್ರೆ ಇವರಿಗೆ ಏನ್ ಹೇಳ್ಬೇಕು ಅಂತಾ ಸ್ಥಳೀಯರು ಕಿಡಿಕಾರುತ್ತಿದ್ದಾರೆ. ಯೋಗ ಸೆಂಟರ್ ಮಾಡ್ಲೇಬೇಕು ಅಂತಾ ಇದ್ರೆ, ಬೇರೆ ಕಡೆ ಜಾಗ ಗುರುತು ಮಾಡಿ ಮಾಡ್ಲಿ.ಕೆರೆ ಜಾಗದಲ್ಲಿ ಬೇಡ ಅನ್ನೋದು ಸ್ಥಳೀಯರು ಹಾಗೂ ಪರಿಸರವಾದಿಗಳ ಆಗ್ರಹವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹದಾಯಿ ಯೋಜನೆಗೆ ಅನುಮತಿ ನಿರಾಕರಿಸಿ ಕೇಂದ್ರದಿಂದ ಕನ್ನಡಿಗರಿಗೆ ಅನ್ಯಾಯ: ಸಿದ್ದರಾಮಯ್ಯ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಪರಿಶುದ್ಧ ಚಿನ್ನದ ದರ ಇಂದು ಹೊಸ ದಾಖಲೆ

ಆಂಧ್ರದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ: ಆರ್ ಅಶೋಕ್, ವಿಜಯೇಂದ್ರ ಆಕ್ರೋಶ

ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಇಂದಾದ್ರೂ ಸಿಗ್ತಾರಾ ರಾಹುಲ್ ಗಾಂಧಿ

ಮುಂದಿನ ಸುದ್ದಿ
Show comments