Select Your Language

Notifications

webdunia
webdunia
webdunia
webdunia

ದೇವನಹಳ್ಳಿ ಹೋಟೆಲ್‌ನ ಸಂಪ್‌ನಲ್ಲಿ ಶವ ಪತ್ತೆ.

ದೇವನಹಳ್ಳಿ ಹೋಟೆಲ್‌ನ ಸಂಪ್‌ನಲ್ಲಿ ಶವ ಪತ್ತೆ.
ಬೆಂಗಳೂರು , ಗುರುವಾರ, 29 ಜೂನ್ 2017 (20:33 IST)
ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಶಾಂತಿ ಸಾಗರ್ ಹೋಟೆಲ್‌ನ ಸಂಪ್‌ನಲ್ಲಿ ಸಪ್ಲೈಯರ್‌ನೊಬ್ಬನ ಶವ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಶವ ಸಂಪ್‌ನಲ್ಲಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
 
ಕಳೆದ ನಾಲ್ಕು ದಿನಗಳಿಂದ ಶವ ಸಂಪ್‌ನಲ್ಲಿ ತೇಲುತ್ತಿದ್ದರೂ ನಿರ್ಲಕ್ಷ ತೋರಿದ್ದ ಹೋಟೆಲ್ ಸಿಬ್ಬಂದಿ, ಇದೇ ಸಂಪ್‌ನ ನೀರನ್ನು ದಿನಂ ಪ್ರತೀ ಗ್ರಾಹಕರಿಗೆ ಕುಡಿಯಲು ನೀಡುತ್ತಿದ್ದರು ಎನ್ನುವ ಆಘಾತ ಸಂಗತಿ ಬಹಿರಂಗವಾಗಿದೆ.
 
ಕೋಲಾರ ತಾಲೂಕಿನ ಮಾಲೂರು ನಿವಾಸಿ ಕೃಷ್ಣ(35). ಕಳೆದ 15 ದಿನದ ಹಿಂದೆ ಶಾಂತಿ ಸಾಗರ್ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಹೋಟೆಲ್‌ನಲ್ಲಿ ಮೃತ ವ್ಯಕ್ತಿ ಸಪ್ಲೈಯರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ದೇವನಹಳ್ಳಿ ತಾಲೂಕಿನ ಬಿದಲೂರು ಮೃತನ ಹೆಂಡತಿ ಗ್ರಾಮವಾಗಿದೆ ಎಂದು ಮೂಲಗಳು ತಿಳಿಸಿವೆ.
 
ಹೋಟೆಲ್ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆ ವಿರುದ್ಧ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಹೋಟೆಲ್ ಮುಚ್ಚುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಗೆ ಲಂಚ ಕೊಡಲು ಪಿಗ್ಗಿ ಬ್ಯಾಂಕ್‌ ತಂದ ಐದು ವರ್ಷದ ಬಾಲಕಿ