Select Your Language

Notifications

webdunia
webdunia
webdunia
webdunia

ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಬಿಗ್ ಶಾಕ್ ನೀಡಿದ ಡಿಸಿಎಂ

ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಬಿಗ್ ಶಾಕ್ ನೀಡಿದ ಡಿಸಿಎಂ
ಬೆಂಗಳೂರು , ಗುರುವಾರ, 22 ನವೆಂಬರ್ 2018 (12:46 IST)
ಬೆಂಗಳೂರು : ಪಂಚ ಕ್ಷೇತ್ರಗಳ ಉಪಚುನಾವಣೆ ನಂತರ ಸಂಪುಟ ವಿಸ್ತರಣೆಗೆ ಮಾಡಬಹುದು ಎಂದುಕೊಂಡಿರುವ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಇದೀಗ ಡಿಸಿಎಂ ಪರಮೇಶ್ವ‍ರ್ ಅವರು ಶಾಕ್ ನೀಡಿದ್ದಾರೆ.


ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವ‍ರ್ ಅವರು,’ ಈ ತಿಂಗಳಲ್ಲೇ ಮಾಡಬೇಕು ಅನ್ನೋದು ನಮ್ಮ ಉದ್ದೇಶವಾಗಿದ್ದು, ಈ ಬಗ್ಗೆ ನಾವು ಈಗಾಗಲೇ ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ಸಿ.ವೇಣುಗೋಪಾಲ್ ಬಳಿ ಚರ್ಚೆ ನಡೆಸಿದ್ದೇವೆ, ಅವರು ರಾಹುಲ್ ಜೊತೆ ಚರ್ಚಿಸಿ ನಮಗೆ ತಿಳಿಸುತ್ತಾರೆ ಅಂತ ಹೇಳಿದರು ಎಂದು ತಿಳಿಸಿದ್ದಾರೆ.


ಆದರೆ ರಾಹುಲ್ ಗಾಂಧಿಯವರು ಸದ್ಯಕ್ಕೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಕಾರಣದಿಂದ ಇನ್ನೂ ಕೆ.ಸಿ.ವೇಣುಗೋಪಾಲ್ ಅವರು ಅವರನ್ನು ಭೇಟಿಯಾಗಿಲ್ಲ, ಹೀಗಾಗಿ ರಾಹುಲ್ ಭೇಟಿ ಮಾಡಿದ ನಂತರ ಮಾತುಕತೆ ನಡೆಸಿ, ಅನುಮತಿ ಸಿಕ್ಕ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಅಂತ ಹೇಳಿದ್ದಾರೆ.


ಇವೆಲ್ಲಾ ಪ್ರತಿಕ್ರಿಯೆಗಳು ಮುಗಿಯುವ ಹೊತ್ತಿಗೆ ಲೋಕಸಭಾ ಚುನಾವಣೆ ಬರಲಿದೆ. ಆದಕಾರಣ ಆ ವೇಳೆ ಸಂಪುಟ ವಿಸ್ತರಣೆ ಮಾಡಿ, ಮುಂದೆ ಉಂಟಾಗುವ ಅದರ ನಷ್ಟವನ್ನು ಅನುಭವಿಸುವ ಬದಲು ಎಲ್ಲವನ್ನೂ ಲೋಕಸಭಾ ಚುನಾವಣೆ ಮುಗಿದ ಬಳಿಕವೇ ನೋಡಿಕೊಂಡರೆ ಉತ್ತಮ ಎನ್ನುವ ಅಭಿಪ್ರಾಯ ಮೂಡಿ ಬಂದಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗಿಂತ 3 ವರ್ಷದ ಮೊಮ್ಮಗನೇ ಶ್ರೀಮಂತ!