Webdunia - Bharat's app for daily news and videos

Install App

ಅನರ್ಹ ಶಾಸಕನಿಗೆ ಡಿಸಿಎಂ ಮಾಡಿದ್ರು ಮಂಗಳಾರತಿ – ಬಿಜೆಪಿ ಅಭ್ಯರ್ಥಿಗೆ ಇರುಸು ಮುರುಸು

Webdunia
ಸೋಮವಾರ, 18 ನವೆಂಬರ್ 2019 (16:08 IST)
ನೂರಾರು ಜನರೆದುರು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕರಿಗೆ ಡಿಸಿಎಂ ಇರುಸು ಮುರುಸು ಉಂಟುಮಾಡಿರೋ ಘಟನೆ ನಡೆದಿದೆ.

ಡಿಸಿಎಂ ಲಕ್ಷ್ಮಣ ಸವದಿ ಪಕ್ಕ‌ ಕುಳಿತುಕೊಳ್ಳಲು ಹೋಗಿ ಇರಿಸು ಮುರಿಸು ಅನುಭವಿಸಿದ್ದಾರೆ ಅನರ್ಹ ಶಾಸಕ ಕುಮಟಳ್ಳಿ. ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ಕಾರ್ಯಕರ್ತರ ಎದುರೇ ಇರಿಸು ಮುರಿಸು ಅನುಭವಿಸಿದ್ದಾರೆ.
ಕಾರ್‌ ನಲ್ಲಿ ಕುಳಿತುಕೊಳ್ಳಲು ಬಂದ ಕುಮಟಳ್ಳಿಗೆ ಜಾಗ ಬಿಟ್ಟು ಕೊಡಲಿಲ್ಲ ಸವದಿ. ಕುಮಟಳ್ಳಿ ಕುಳಿತುಕೊಳ್ಳಲು ಬಂದಾಗ ತಿರುಗಿಯೂ ನೋಡದೇ ಕುಳಿತಿದ್ದರು ಸವದಿ.

ಬಳಿಕ ಮತ್ತೊಂದು ಬದಿಗೆ ಬಂದ ಕುಮಟಳ್ಳಿಗೆ ಜಾಗ ಬಿಟ್ಟು ಕೊಟ್ಟರು ಸಚಿವ ಸಿ.ಸಿ. ಪಾಟೀಲ. ಅಥಣಿಯ ತಹಸೀಲ್ದಾರ ಕಚೇರಿ ಎದುರು ನಡೆದ ಘಟನೆ ಇದಾಗಿದೆ.

ನಾಮಪತ್ರ ಸಲ್ಲಿಸಿ ವಾಪಸ್ ಹೋಗುವಾಗ ನಡೆದ ಘಟನೆ ಇದಾಗಿದ್ದು, ಕೆಲಕ್ಷಣ ಬಾಗಿಲ ಬಳಿ ನಿಂತರೂ ಪಕ್ಕಕ್ಕೆ ಸರಿಯದ ಸವದಿ ನಡೆ ಕುತೂಹಲ ಮೂಡಿಸಿತು.

ಇದರಿಂದಾಗಿ ಸವದಿ - ಕುಮಟಳ್ಳಿ ಹತ್ತಿರ ಹತ್ತಿರ ಅಂದರೂ ಒಳಗೊಳಗೆ ಮುನಿಸಿದೆಯಾ? ಎನ್ನುವ ಪ್ರಶ್ನೆ ಮೂಡಿಸಿದೆ ಈ ಪ್ರಸಂಗ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments