Select Your Language

Notifications

webdunia
webdunia
webdunia
webdunia

ತಂದೆ-ತಾಯಿ ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗಳು

ತಂದೆ-ತಾಯಿ ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗಳು
ಬಾಗಲಕೋಟೆ , ಬುಧವಾರ, 6 ಅಕ್ಟೋಬರ್ 2021 (11:13 IST)
ತಂದೆ-ತಾಯಿ ಬುದ್ದಿವಾದ ಹೇಳುವಲ್ಲಿ ಸ್ವಲ್ಪ ಸಿಟ್ಟು ಮಾಡಿಕೊಂಡ ಕಾರಣ 18 ವರ್ಷದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಜರುಗಿದೆ.

ಹೌದು ಸೌಂದರ್ಯ ಸಂಜು ಗೊಲಭಾಂವಿ ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ. ನಗರದ ಅಶೋಕ ಕಾಲನಿಯ ನಿವಾಸಿ, ಪಿಯು ದ್ವಿತೀಯ ವರ್ಷದಲ್ಲಿದ್ದ ಸೌಂದರ್ಯ ಮನೆಯಲ್ಲಿ ಮಗಳೊಂದಿಗೆ ಜಗಳವಾಗಿ ಅಭ್ಯಾಸ ಮಾಡದೆ ಊರಲ್ಲಿ ತಿರುಗಾಡುವದು ಮಾಡುತ್ತಿದ್ದಿಯಾ, ಕಾಲಮಾನ ಸೂಕ್ಷ್ಮವಾಗಿದೆ ಬರಿ ಊರಲ್ಲಿ ತಿರುಗಾಡುತ್ತಿಯಾ ಎಂದು ಸಿಟ್ಟು ಮಾಡಿಕೊಂಡು ಬುದ್ದಿವಾದ ಹೇಳಿದ್ದರಿಂದ ಅದನ್ನೇ ಸೌಂದರ್ಯ ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿ ಯಾರೂಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ ಬಳೆಚೂರಿ(ಮಿಂಚಿನ)ನ ಪುಡಿಯನ್ನು ನೀರಿನಲ್ಲಿ ಹಾಕಿಕೊಂಡು ಕುಡಿದು ಮೃತಪಟ್ಟ ಘಟನೆ ನಡೆದಿದೆ.ಘಟನೆ ಜರುಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದ ಡಿ.ಕೆ.ಶಿವಕುಮಾರ್