ಬೆಂಗಳೂರು ಫುಟ್ ಬಾಲ್ ಕ್ಲಬ್ ಬಿಎಫ್ ಸಿ ಮಾಡಿರುವ ಪೋಸ್ಟರ್ ವಿರುದ್ಧ ದರ್ಶನ್ ಫ್ಯಾನ್ಸ್ ಗರಂ

Webdunia
ಗುರುವಾರ, 8 ಸೆಪ್ಟಂಬರ್ 2022 (16:27 IST)
ಸೋಶಿಯಲ್ ಮೀಡಿಯಾದಲ್ಲಿ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್ ಒಂದು ಇದೀಗ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ವಿಶೇಷವಾಗಿ ಎಡಿಟ್ ಮಾಡಿರುವ ಚಿತ್ರವೊಂದನ್ನು ಬೆಂಗಳೂರು ಎಫ್ ಸಿ ತನ್ನ ಅಧಿಕೃತ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದೆ. ರಕ್ಷಿತ್ ಶೆಟ್ಟಿ, ಯಶ್ ಹಾಗೂ ಸುದೀಪ್ ಅವರ ಫೋಟೊಗಳನ್ನು ಬಳಸಿ ಬೆಂಗಳೂರು ಫುಟ್‌ಬಾಲ್ ತಂಡದ ಜರ‍್ಸಿ ತೊಡಿಸಿ ಎಡಿಟ್ ಮಾಡಲಾದ ಚಿತ್ರ ಇದಾಗಿದೆ. 'ಅವರಂತೆ ಯಾರೂ ಇಲ್ಲ' ಎಂದೂ ಸಹ ಚಿತ್ರದಲ್ಲಿ ಬರೆಯಲಾಗಿದೆ.
 
ಹೀಗೆ ಎಡಿಟ್ ಮಾಡಲಾಗಿರುವ ಫೋಟೊವನ್ನು ಅಪ್‌ಲೋಡ್ ಮಾಡಿರುವ ಬೆಂಗಳೂರು ಎಫ್ ಸಿ "ಕಿಚ್ಚ ಸುದೀಪ್, ಯಶ್, ರಕ್ಷಿತ್ ಶೆಟ್ಟಿ ಅಂತೆ ಯಾರೂ ಇಲ್ಲ!' ಎಂದು ಕ್ಯಾಪ್ಷನ್ ಬರೆದುಕೊಂಡಿದೆ. ಇನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಈ ಪೋಸ್ಟ್ ನೋಡಿದ ಈ ಮೂವರು ನಟರ ಅಭಿಮಾನಿಗಳು ಸಂತಸದಿಂದ ಲೈಕ್ ಬಟನ್ ಒತ್ತಿದ್ದರೆ, ರ‍್ಶನ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಎಲ್ಲಾ ಸರಿ ಆದರೆ ಈ ಚಿತ್ರದಲ್ಲಿ ನಮ್ಮ ಡಿ ಬಾಸ್ ಚಿತ್ರವನ್ನು ಏಕೆ ಹಾಕಿಲ್ಲ" ಎಂದು ಕಾಮೆಂಟ್ ಮಾಡಿ ಕೋಪಗೊಂಡಿದ್ದಾರೆ.
 
ಹೀಗೆ ಬೆಂಗಳೂರು ಎಫ್‌ಸಿ ಮಾಡಿರುವ ಟ್ವೀಟ್‌ನಲ್ಲಿದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡಲು ಆರಂಭಿಸುತ್ತಿದ್ದಂತೆ ಫ್ಯಾನ್ ವಾರ್ ಆರಂಭಗೊಂಡಿದೆ. ಕೂಡಲೇ ಈ ಪೋಸ್ಟ್ ಡಿಲಿಟ್ ಮಾಡಿ ಎಂದು ದರ್ಶನ್ ಫ್ಯಾನ್ಸ್ ಕಾಮೆಂಟ್ ಮಾಡಿದ್ದರೆ, ಯಶ್ ಹಾಗೂ ಸುದೀಪ್ ಅಭಿಮಾನಿಗಳು ಪೋಸ್ಟ್ ಸರಿಯಾಗಿಯೇ ಇದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
 
ಅವರಂತೆ ಯಾರೂ ಇಲ್ಲ; ಯಾಕೆ ದರ್ಶನ್ ಇಲ್ವಾ? "ಈ ರೀತಿ ಪೋಸ್ಟ್‌ಗಳನ್ನು ಮಾಡುವುದರಿಂದಲೇ ಫ್ಯಾನ್ ವಾರ್ ಶುರುವಾಗುವುದು ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಇಂಥ ಪೋಸ್ಟ್‌ಗಳನ್ನು ಮಾಡುವಾಗ ಸರಿಯಾದ ಕ್ಯಾಪ್ಷನ್ ಬಳಸಿ ಎಂದಿದ್ದಾರೆ. ಅವರಂತೆ ಯಾರೂ ಇಲ್ಲ ಎಂದು ಹೊಗಳುವ ಭರದಲ್ಲಿ ಬೇರೆ ನಟರ ಅಭಿಮಾನಿಗಳಲ್ಲಿ ಬೇಸರ ಮೂಡುವಂತೆ ಮಾಡಬೇಡಿ, ಯಾಕೆ ಅವರಂತೆ ದರ್ಶನ್ ಇಲ್ವಾ" ಎಂದು ಕಾಮೆಂಟ್ ಮಾಡಿ ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟನೆಲ್ ರೋಡ್ ಹೆಸರಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಬೇಡ: ಶೋಭಾ ಕರಂದ್ಲಾಜೆ ಎಚ್ಚರಿಕೆ

ಬೆಂಗಳೂರು ಸುರಂಗ ರಸ್ತೆ ನೆಪದಲ್ಲಿ ದುಡ್ಡು ಹೊಡೆಯುವ ಸ್ಕೀಮ್: ಆರ್ ಅಶೋಕ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬಿಹಾರ ಚುನಾವಣೆ ನ್ಯಾಯವಾಗಿ ನಡೆದಿಲ್ಲ ಎಂದ ರಾಹುಲ್ ಗಾಂಧಿ: ವಿದೇಶದಲ್ಲಿ ಕೂತು ನೆಪ ಹೇಳ್ತೀರಿ ಎಂದ ನೆಟ್ಟಿಗರು

ರಾಹುಲ್ ಗಾಂಧಿ ಮತಗಳ್ಳತನ ಹೋರಾಟದ ಕತೆ ಏನಾಗಲಿದೆ

ಮುಂದಿನ ಸುದ್ದಿ
Show comments