Publish Date: Mon, 17 Dec 2018 (15:09 IST)
Updated Date: Mon, 17 Dec 2018 (15:13 IST)
KRS ಅಣೆಕಟ್ಟೆ ಬಳಿ ನಡೆಯುತ್ತಿರುವ ಗಣಿಗಾರಿಕೆ ಹಿಂದೆ ಸಚಿವರ ಕೈವಾಡವಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಕೆ ಆರ್ ಎಸ್ ಉಳಿಸಿ ಜನಾಂದೋಲನ ಶುರುವಾಗಿದೆ.
ಮಂಡ್ಯ ಜಿಲ್ಲೆಯ KRS ಅಣೆಕಟ್ಟೆ ಬಳಿ ಸಭೆ ನಡೆಯಿತು. ಜನಾಂದೋಲನ ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿಕೆ ನೀಡಿದ್ದು, KRS ಅಣೆಕಟ್ಟೆ ಬಳಿ ನಡೆಯುತ್ತಿರುವ ಗಣಿಗಾರಿಕೆ ಹಿಂದೆ ಸಚಿವರ ಕೈವಾಡವಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಲ್ಲವನ್ನು ಕಣ್ಮುಚ್ಚಿಕೊಂಡು ನೋಡ್ತಿದ್ದಾರೆ. ಬಳ್ಳಾರಿ ಗಣಿಗಾರಿಕೆ ಸಂದರ್ಭದಲ್ಲೂ ದೇವೇಗೌಡರು ಚಕಾರ ತಗಿಲಿಲ್ಲ ಎಂದು ದೂರಿದರು.
ಈಗಲೂ KRS ಗಣಿಗಾರಿಕೆ ಬಗ್ಗೆ ಮಾತನಾಡ್ತಿಲ್ಲ. KRS ಬಳಿ ಗಣಿಗಾರಿಕೆ ನಡೆಸೋದು ತುಂಬಾ ಅಪಾಯಕಾರಿಯಾಗಿದೆ. ಗಣಿಗಾರಿಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.