Webdunia - Bharat's app for daily news and videos

Install App

ಹೆಣ್ಣು ಮಗುವಿನೊಂದಿಗೆ ನದಿ ದಾಟಿ ಕಾಡಿಗೆ ಹೋಗಿದ್ಯಾಕೆ?

Webdunia
ಗುರುವಾರ, 11 ಜುಲೈ 2019 (16:33 IST)
ಮುಸುಕುಧಾರಿಯೊಬ್ಬ ಹೆಣ್ಣುಮಗುವನ್ನು ಹೊತ್ತುಕೊಂಡು ನದಿ ದಾಟಿ ಕಾಡಿಗೆ ಹೋಗಿರುವ ಘಟನೆ ನಡೆದಿದೆ.

ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳು ಮಗುವನ್ನು ಅಪಹರಣ ಮಾಡಿದ್ದಾರೆ.

ಸಂತೋಷ್ ನಾಯ್ಕ್ ಎಂಬುವರ ಎರಡು ವರ್ಷ ಪ್ರಾಯದ  ಹೆಣ್ಣು ಮಗು "ಸಾನ್ವಿಕಾ" ತಾಯಿಯೊಂದಿಗೆ ಮಲಗಿರುವಾಗ ಮುಸುಕು ಧಾರಿ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾನೆ.  ತುಂಬಿ ಹರಿಯುವ ಕುಮ್ಜಾ ನದಿಯನ್ನು ದಾಟಿ ಕಾಡಿನ ಮೂಲಕ ಹೊಸಂಗಡಿಯತ್ತಾ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೆಣ್ಣು ಮಗುವನ್ನು ಅಪಹರಿಸಿಕೊಂಡು ಹೋಗುವಾಗ ತಾಯಿಗೆ ಎಚ್ಚರವಾಗಿ ಕೂಡಲೇ ಆ ವ್ಯಕ್ತಿಯ ಹಿಂದೆ ಓಡಿದ್ದಾರೆ. ಆದರೆ ನದಿಯ ನೀರು ತುಂಬಾ ಇರುವ ಕಾರಣ ಹಾಗೂ ಕತ್ತಲೆ ಇರುವ ಕಾರಣ ಆತನನ್ನು ಹಿಂಬಾಲಿಸಲು ಸಾಧ್ಯವಾಗಲಿಲ್ಲ.

ಇವರ ಮನೆಗೆ ಬರಲು ಮೂರ್ನಾಲ್ಕು ದಾರಿಗಳಿದ್ದರೂ ನದಿಯ ದಾರಿಯಲ್ಲೇ ಹೋಗಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಕುಂದಾಪುರ ತಾಲ್ಲೂಕಿನ ಎಡಮೊಗೆ ಕುಮ್ಟಿ ಬೇರಿನಲ್ಲಿ ಘಟನೆ ನಡೆದಿದೆ. 

ಮಕ್ಕಳ ಕಳ್ಳತನ ಮಾಡಿ ಸಾಗಿಸುವ ಮಾಫಿಯಾದ ಕೈವಾಡನೋ ಅಥವಾ ಕೌಂಟುಬಿಕ ಮನಸ್ತಾಪದಿಂದ ಆಗಿರುವ ಘಟನೆಯೋ ಎಂದು ಪೊಲೀಸರು ಪತ್ತೆ ಹಚ್ಚಬೇಕಿದೆ. 

ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಬಂದು ಪರೀಶಿಲನೆ ನಡೆಸುತ್ತಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಭೀತಿ: ಮಂಗಳೂರು, ಬೆಂಗಳೂರು ಪ್ರಯಾಣಿಕರ ಗಮನಕ್ಕೆ

ಇರಾನ್ ಇಸ್ರೇಲ್ ನಡುವಿನ ಯುದ್ಧದಿಂದ ಕರ್ನಾಟಕಕ್ಕಾಗುವ ಪರಿಣಾಮಗಳೇನು

Karnataka Weather: ರಾಜ್ಯದಲ್ಲಿ ಇಂದು ಹೇಗಿರಲಿದೆ ಮಳೆ ಪರಿಸ್ಥಿತಿ ಇಲ್ಲಿದೆ ವಿವರ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

ಮುಂದಿನ ಸುದ್ದಿ
Show comments