Webdunia - Bharat's app for daily news and videos

Install App

ಕಸ ಗುಡಿಸುವ ಕೋಟ್ಯಾಧಿಪತಿ..!!!

Webdunia
ಸೋಮವಾರ, 5 ಸೆಪ್ಟಂಬರ್ 2022 (16:50 IST)
10 ವರ್ಷಗಳಿಂದ ಈ ಹಣ ತೆಗೆದುಕೊಳ್ಳದ ಕಾರಣಕ್ಕಾಗಿ ಅಕೌಂಟ್‌ನಲ್ಲಿ 70 ಲಕ್ಷವಾಗಿ ಬೆಳೆದಿತ್ತು. ಭಿಕ್ಷೆ ಬೇಡುವ ಮೂಲಕ, ತಾಯಿಯ ಪಿಂಚಣಿ ಹಣದ ಮೂಲಕ ಜೀವನ ಸಾಗಿಸುತ್ತಿದ್ದ ಈತ ಟಿಬಿ ಕಾಯಿಲೆಗೂ ತುತ್ತಾಗಿದ್. ಹಾಗಿದ್ದರೂ ಈ ಹಣವನ್ನು ತೆಗೆದಿರಲಿಲ್ಲ. ಕೊನೆಗೆ ಇದೇ ಕಾಯಿಲೆಯಿಂದಾಗಿ ಶನಿವಾರ ಸಾವು ಕಂಡಿದ್ದಾರೆ. ಈತನ ಹೆಸರು ಧೀರಜ್‌. ಪ್ರಯಾಗ್‌ರಾಜ್‌ ಸಂಗಮ್‌ ಸಿಟಿಯಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಕಚೇರಿಯ ಕುಷ್ಠರೋಗ ವಿಭಾಗದ ಮಿಲಿಯನೇರ್‌ ವ್ಯಕ್ತಿ ಈತ. ಧೀರಜ್‌ನ ತಂದೆ ಕೂಡ ಇದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 2012ರಲ್ಲಿ ತಂದೆ ಕೆಲಸದಲ್ಲಿರುವಾಗಲೇ ಸಾವು ಕಂಡಿದ್ದರು. ಆ ಬಳಿಕ ಅನುಕಂಪದ ಅಧಾರದ ಮೇಲೆ ಈ ಕೆಲಸ ಸಿಕ್ಕಿತ್ತು. ಧೀರಜ್‌ನ ತಂದೆ ಕೂಡ ಎಂದಿಗೂ ತನ್ನ ಸಂಬಳವನ್ನು ಖಾತೆಯಿಂದ ತೆಗೆದಿರಲಿಲ್ಲ. ಅದೇ ಹಾದಿಯಲ್ಲಿ ಸಾಗಿದ ಮಗ ಕೂಡ ಕಳೆದ 10 ವರ್ಷದಿಂದ ತನ್ನ ಸಂಬಳವನ್ನು ತೆಗೆದಿರಲಿಲ್ಲ.

ಧೀರಜ್ ಪ್ರಯಾಗರಾಜ್ ಜಿಲ್ಲಾ ಕುಷ್ಠರೋಗ ಇಲಾಖೆಯಲ್ಲಿ ಕಸಗುಡಿಸುವುದು ಮಾತ್ರವಲ್ಲ ವಾಚ್‌ಮನ್‌ ಆಗಿಯೂ ಕೆಲಸ ಮಾಡುತ್ತಿದ್ದರು. ಆದಾಯ ತೆರಿಗೆಯನ್ನೂ ಕೂಡ ಈತ ಕಟ್ಟುತ್ತಿದ್ದ. ಇದೇ ವರ್ಷದ ಆರಂಭದಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಈತನ ಕಚೇರಿಗೆ ಬಂದು ಈತನನ್ನು ಹುಡುಕುವವರೆಗೂ, ಈತನೊಬ್ಬ ಕೋಟ್ಯಧಿಪತಿ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಧೀರಜ್‌ ಧರಿಸುವ ಕೊಳೆಯಾದ ಬಟ್ಟೆಗಳು ಹಾಗೂ ಆತನ ವೇಷಭೂಷಣ ನೋಡಿದ ಎಲ್ಲರೂ ಆತನನ್ನು ಭಿಕ್ಷುಕ ಎಂದುಕೊಂಡಿದ್ದರು. ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಗಳು ಕಾಲಿಗೆ ಬಿದ್ದು, ಗೋಗೆರೆದು ಹಣ ಪಡೆಯುತ್ತಿದ್ದ. ಅವರೂ ಕೂಡ ಈತ ಬಡವ ಇರಬೇಕು ಎಂದುಕೊಂಡು ಹಣ ನೀಡುತ್ತಿದ್ದರು. ಆದರೆ, ಬ್ಯಾಂಕ್‌ನ ಅಧಿಕಾರಿಗಳು ಬಂದು ಧೀರಜ್‌ನ ಬಗ್ಗೆ ತಿಳಿಸಿದಾಗ ಸ್ವತಃ ಆಸ್ಪತ್ರೆಯ ಸಿಬ್ಬಂದಿಗಳೇ ಹೌಹಾರಿಹೋಗಿದ್ದವು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬರಪೀಡಿತ ರೈತರಿಗೆ ಸರ್ಕಾರ ತಕ್ಷಣ 10 ಸಾವಿರ ಕೋಟಿ ರೂ ನೀಡಬೇಕು: ವಿಜಯೇಂದ್ರ

ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಲ್ಲ ಎಂದ ಬಿಕೆ ಹರಿಪ್ರಸಾದ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ತನ್ನ ಪಾಡಿಗೆ ನಡೆದು ಹೋಗುತ್ತಿದ್ದ ಬಾಲಕಿ ಅದೊಂದು ಕಾರಣಕ್ಕೆ ಪ್ರಾಣವೇ ಕಳೆದುಕೊಂಡಳು: ಶಾಕಿಂಗ್ Video

ಎರಡು ಗೋವುಗಳ ನಡುವಿನ ಕಿತ್ತಾಟದಲ್ಲಿ ಬೈಕ್ ಸವಾರನ ಕತೆ ಗೋವಿಂದ Video

ಮುಂದಿನ ಸುದ್ದಿ
Show comments