Select Your Language

Notifications

webdunia
webdunia
webdunia
webdunia

ಮಾರ್ವಾಡಿ ಅತ್ತೆ ಸೊಸೆಯ ಭೀಕರ ಹತ್ಯೆ!

ಮಾರ್ವಾಡಿ ಅತ್ತೆ ಸೊಸೆಯ ಭೀಕರ ಹತ್ಯೆ!
ಬೆಂಗಳೂರು , ಸೋಮವಾರ, 26 ಸೆಪ್ಟಂಬರ್ 2016 (14:25 IST)
ರಾಜ್ಯಧಾನಿ ಬೆಂಗಳೂರು ಸೇಫ್ ಅಲ್ಲ ಎನ್ನುವುದು ಮತ್ತೆ ಮತ್ತೆ ಸಾಭೀತಾಗುತ್ತದೆ. ಹಾಡು ಹಗಲೇ ಅತ್ತೆ, ಸೊಸೆಯನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ವಸಂತ್ ನಗರದಲ್ಲಿ ವರದಿಯಾಗಿದೆ.
 
ವಂಸತ್ ನಗರದ ಕ್ಯಾಂಟೋನ್‌ಮೆಂಟ್ ಪ್ರದೇಶದಲ್ಲಿ ವಾಸವಿದ್ದ ಪಂಜಾಬ್ ಮೂಲದ ಅತ್ತೆ ಸಂತೋಷಿ ಬಾಯಿ (50) ಹಾಗೂ ಸೊಸೆ ಲತಾ (30) ಎನ್ನುವವರನ್ನು ದುಷ್ಕರ್ಮಿಗಳು ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
 
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ, ಅತ್ತೆ ಹಾಗೂ ಸೊಸೆಯನ್ನು ಕೊಲೆಗೈದಿದ್ದಾರೆ. ಹಣದ ಆಸೆಗೆ ದುಷ್ಕರ್ಮಿಗಳು ಹತ್ಯೆ ನಡಿಸಿರಬಹುದು ಎಂದು ಹೈಗ್ರೌಂಡ್ ಠಾಣಾ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
 
ಘಟನೆ ಕುರಿತಂತೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಕೆಎಸ್‌ಪಿ ಚರಣ್ ರೆಡ್ಡಿ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದೊಂದಿಗೆ ಭಾರತ ಯುದ್ಧ ಮಾಡಲು ಸಾಧ್ಯವೇ ಇಲ್ಲ: ಪಾಕ್ ರಾಯಭಾರಿ