Select Your Language

Notifications

webdunia
webdunia
webdunia
webdunia

ಮೇವಿಲ್ಲದೆ ಮೂಕ ಪ್ರಾಣಿಗಳ ರೋದನೆ

ಮೇವಿಲ್ಲದೆ ಮೂಕ ಪ್ರಾಣಿಗಳ ರೋದನೆ
ಬಳ್ಳಾರಿ , ಶನಿವಾರ, 10 ಸೆಪ್ಟಂಬರ್ 2022 (19:44 IST)
ಬಳ್ಳಾರಿಯ ಬಸರಕೋಡು ಗ್ರಾಮದಲ್ಲಿ ಮೇವಿಲ್ಲದೇ ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕಳೆದ 4-5 ದಿನಗಳಿಂದ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ.  ಮೇವಿನ ಬಣವೆಗಳು ಹಗರಿ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಆದರೆ ಇದುವರೆಗೂ ಅಧಿಕಾರಿಗಳು ಮೇವು ಪೂರೈಕೆ ಮಾಡಿಲ್ಲ. ಗ್ರಾಮಸ್ಥರು ಜಾನುವಾರುಗಳ ಮೂಕರೋಧನೆ ಕಂಡು ಮರುಕ ಪಡುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು, ಮತ್ತೆ ನಾಳೆ ಸಿದ್ದರಾಮಯ್ಯ ಪ್ರವಾಸ ..!