Webdunia - Bharat's app for daily news and videos

Install App

ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕು – ಪ್ರಿಯಾಂಕ್ ಖರ್ಗೆ

Webdunia
ಬುಧವಾರ, 30 ನವೆಂಬರ್ 2022 (19:59 IST)
ಗೋಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯಕ್ಕೆ 5,280 ಕೋಟಿ ಆರ್ಥಿಕ ಹೊಣೆ ಆಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ಕೆಪಿಸಿಸಿ ಕಛೇರಿಯಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿ ಕಳೆದ ವರ್ಷ ಜನವರಿಯಲ್ಲಿ ಕ್ರಾಂತಿ ಕಾರಿ ವಿಧೇಯಕ ತಂದಿದ್ರು ಅದು ಗೋ ಹತ್ಯೆ ನಿಷೇಧ ಕಾಯ್ದೆ.ಕೇಸರಿ ಶಾಲು,ಜೈಕಾರ ಕೂಗಿ ಬಿಲ್ ಪಾಸ್ ಮಾಡಿದ್ರು ಈ ವಿಧೇಯಕ ರೈತರಿಗೆ, ಕಾರ್ಮಿಕರಿಗೆ ಉದ್ಯಮಿಗಳಿಗೆ ಎಷ್ಟು ಲಾಭ ಆಯ್ತು.ಇದರ ಬಗ್ಗೆ ಯಾರ ಯೋಚನೆ ಮಾಡಲೇ ಇಲ್ಲ.ಈ  ಕಾಯ್ದೆಯಿಂದ 5,280 ಕೋಟಿ ಆರ್ಥಿಕ ಹೊಣೆ ರಾಜ್ಯಕ್ಕೆ ಆಗುತ್ತಿದೆ. 500 ಕೋಟಿ ಇದ್ದ ಲೆದರ್ ಇಂಡಸ್ಟ್ರಿ ಆದಾಯ 166.74 ಕೋಟಿಗೆ ಇಳಿಕೆಯಾಗಿದೆ. ಲೆದರ್ ಕಾರ್ಖಾನೆಗಳಲ್ಲಿ 3.5 ಲಕ್ಷ  ಕಾರ್ಮಿಕರು‌ ಇದ್ದಾರೆ.ಅವರೆಲ್ಲರೂ ಬೀದಿಗೆ ಬಂದಿದ್ದಾರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಸರ್ಕಾರ ಮಾಡಿದ್ಯಾ?. ಹಣಕಾಸು ಇಲಾಖೆ ಈ ಕಾಯ್ದೆ ಜಾರಿಯ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಕೋರಿತ್ತು, ಆರ್ಥಿಕ ಪರಿಸ್ಥಿತಿ ಹಾಗೂ ಪರಿಣಾಮಗಳ ಕಾರಣದಿಂದ ಹಣಕಾಸು ಇಲಾಖೆ ಈ ಎಚ್ಚರಿಕೆ ನೀಡಿತ್ತು. ಆದ್ದರಿಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments