Publish Date: Mon, 12 Jul 2021 (20:42 IST)
Updated Date: Mon, 12 Jul 2021 (20:44 IST)
ಪ್ರವಾಸೋದ್ಯಮ, ಸಮುದಾಯಕ ಕೇಂದ್ರಗಳನ್ನು ತೆರೆಯುವ ಮೂಲಕ ಜನದಟ್ಟಣೆಗೆ ಅವಕಾಶ ನೀಡಿರುವುದು ಕೊರೊನಾ 3ನೇ ಅಲೆಗೆ ಆಮಂತ್ರಣ ನೀಡಿದಂತೆ ಎಂದು ತಜ್ಞರು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದೆ.
ಇಂಡಿಯನ್ ಮೆಡಿಕಲ್ ಸೈನ್ಸ್ ಸರಕಾರಗಳು ಲಾಕ್ ಡೌನ್ ಸಡಿಲಗೊಳಿಸುವ ಜೊತೆಗೆ ಜನದಟ್ಟಣೆ ಸೇರಲು ಅವಕಾಶ ಕಲ್ಪಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದರಿಂದ ಕೊರೊನಾ 3ನೇ ಅಲೆ ಆಹ್ವಾನ ನೀಡಿದಂತೆ ಆಗಿದೆ ಎಂದು ಹೇಳಿದೆ.
ಮುಂದಿನ 3 ತಿಂಗಳು ಅತ್ಯಂತ ಮಹತ್ವದ್ದಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಠಿಣ ಕ್ರಮ ಕೈಗೊಂಡು ಕೋವಿಡ್ ಹರಡದಂತೆ ಕ್ರಮ ಕೈಗೊಳ್ಳಬೇಕಾಗಿ ಐಎಂಎ ಸರಕಾರಗಳಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದೆ.