Select Your Language

Notifications

webdunia
webdunia
webdunia
webdunia

ಗಡಿನಾಡ ಜನರಿಗೆ ಈಗ ಕೆಲಸ ಕಳೆದುಕೊಳ್ಳುವ ಚಿಂತೆ

ಗಡಿನಾಡ ಜನರಿಗೆ ಈಗ ಕೆಲಸ ಕಳೆದುಕೊಳ್ಳುವ ಚಿಂತೆ
ಮಂಗಳೂರು , ಭಾನುವಾರ, 31 ಮೇ 2020 (09:07 IST)
ಮಂಗಳೂರು: ಕೊರೋನಾದಿಂದಾಗಿ ಈಗ ಗಡಿನಾಡ ಜನರಿಗೆ ಉದ್ಯೋಗ ಕಳೆದುಕೊಳ್ಳುವ ಚಿಂತೆ ಶುರುವಾಗಿದೆ. ಇದಕ್ಕೆ ಕಾರಣ ಅಂತರಾಜ್ಯಗಳ ನಡುವಿನ ನಿರ್ಬಂಧ.


ಕೇರಳ, ಮಹಾರಾಷ್ಟ್ರದಂತಹ ಗಡಿ ಜಿಲ್ಲೆಗಳಲ್ಲಿರುವ ಜನರು ಉದ್ಯೋಗಕ್ಕಾಗಿ ಪ್ರತಿನಿತ್ಯ ಒಂದು ರಾಜ್ಯದಿಂದ ಇನ್ನೊಂದು ರಾಜ್ಯದ ಗಡಿ ದಾಟಿ ಸಂಚರಿಸುತ್ತಾರೆ. ಆದರೆ ಈಗ ಅಂತರಾಜ್ಯ ಪ್ರವೇಶಕ್ಕೆ ನಿರ್ಬಂಧವಿರುವುದರಿಂದ ಇಲ್ಲಿನವರಿಗೆ ಉದ್ಯೋಗ ಕಳೆದುಕೊಳ್ಳುವ ಭಯ ಆವರಿಸಿದೆ.

ಈಗಾಗಲೇ ಕಚೇರಿಗಳು ಪುನರಾರಂಭವಾಗಿದೆ. ಆದರೆ ನಿರ್ಬಂಧದಿಂದಾಗಿ ಕಚೇರಿಗೆ ತೆರಳಲು ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಗಡಿನಾಡ ಜನತೆ ಸರ್ಕಾರಗಳಿಗೆ ಬಸ್, ರೈಲಿನ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

SSLC ಪರೀಕ್ಷೆ ಈ ವರ್ಷ ಹೇಗೆ ನಡೆಯುತ್ತೆ ಗೊತ್ತಾ?