ನದಿ ತೀರದಲ್ಲಿ ಸಿಕ್ಕ ಶವ: ಕೊಲೆನಾ? ಆತ್ಮಹತ್ಯೆಯೋ?

Webdunia
ಗುರುವಾರ, 8 ಆಗಸ್ಟ್ 2019 (19:24 IST)
ನದಿ ತೀರದಲ್ಲಿ ಶವವೊಂದು ದೊರಕಿದ್ದು, ಸಾವಿನ ಸುತ್ತ ಅನುಮಾನ ವ್ಯಕ್ತವಾಗತೊಡಗಿದೆ.

ಕಾಕತಿ ಗ್ರಾಮದ ಮಾರ್ಕಂಡೇಯ ನದಿಯ ಹತ್ತಿರ ಇರುವ ನೀರಿನ ತಗ್ಗಿನಲ್ಲಿ  ಶವ ಪತ್ತೆಯಾಗಿದೆ. ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ಧಾವಿಸಿದ ಕಾಕತಿ  ಪೊಲೀಸ್ ಎಎಸ್ಐ ನವಲೆ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ  ಶವ ಹೊರ ತೆಗೆಯಲಾಯಿತು.

ನಂತರ ಕುಂಟುಂಬದವರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೆಳಗಾವಿ ತಾಲೂಕಿನ ಕಾಕತಿಯ ಶಾಸ್ತ್ರಿ ನಗರದ ನಿವಾಸಿ ಮಾರುತಿ ಹಳಿಮನಿ(52) ಸಂಶಯಾಸ್ಪದ ಸಾವನ್ನಪ್ಪಿದವರು.  

ಘಟನೆ ವಿವರ :
ಮೃತ ಮಾರುತಿ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಗ್ರಾನೈಟ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ  ಕೆಲಸ ಮಾಡುತ್ತಿದ್ದಾರೆ. ಮಳೆಯ ಕಾರಣದಿಂದಾಗಿ ಕಳೆದ  2 ದಿನಗಳಿಂದ ಕಂಪನಿಗೆ ರಜೆಯಿದ್ದು  ಮನೆಯಲ್ಲಿಯೇ ಇದ್ದರು.

ಮಾರುತಿ ಸಂಜೆ ವೇಳೆಗೆ ಕಾಕತಿಯಿಂದ ಮಾರ್ಕಂಡೇಯ ಸಕ್ಕರೆ ಕಾರ್ಖಾನೆಯ ರಸ್ತೆ ಪಕ್ಕದಲ್ಲಿರುವ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಒಂದೆಡೆಯಾದರೆ, ಇದು ಕೊಲೆಯಾಗಿದೆ ಎಂದು ಖಚಿತವಾಗಿ ಯಾವುದೇ ಮೂಲಗಳಿಂದ ಮಾಹಿತಿ ಹಾಗೂ ಕುಟುಂಬದವರಿಂದ ಯಾವುದೇ ಸಂಶಯ ವ್ಯಕ್ತವಾಗದ ಕಾರಣ ಆಕಸ್ಮಿಕ ಸಾವು ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಮಲ್ಲಿಕಾರ್ಜುನ ಖರ್ಗೆ ಮೇಲೆ ರಾಹುಲ್ ಗಾಂಧಿಗೆ ಎಂಥಾ ಪ್ರೀತಿ, ಸಂಸತ್ ನಲ್ಲೇ ಭುಜಕ್ಕೆ ಮಸಾಜ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಶಬರಿಮಲೆಗೆ ಹೋಗುತ್ತಿದ್ದ ಭಕ್ತರ ಜೊತೆ ಬಸ್ ಕಂಡಕ್ಟರ್ ವರ್ತನೆಗೆ ನೆಟ್ಟಿಗರು ಫಿದಾ video

ಸೈಡಿಗೆ ಹೋಗೋ.. ನೀರಾಟಕ್ಕೆ ಅಡ್ಡಿಪಡಿಸಿದ್ದಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಆನೆ ಮಾಡಿದ್ದೇನು

ಮುಂದಿನ ಸುದ್ದಿ
Show comments