Webdunia - Bharat's app for daily news and videos

Install App

ಕುರಿ ಸಂತೆಗಾಗಿ ಹಳ್ಳಿಗಳ ನಡುವೆ ಮುಂದುವರಿದ ಗಲಾಟೆ!

Webdunia
ಶುಕ್ರವಾರ, 3 ಆಗಸ್ಟ್ 2018 (14:17 IST)
ತಮ್ಮ ಗ್ರಾಮದಲ್ಲಿಯೇ ಕುರಿ ಸಂತೆ ನಡೆಸುವಂತೆ ಆ ಎರಡೂ ಗ್ರಾಮಗಳ ಜನರ ನಡುವೆ ವಾಗ್ವಾದ ಮುಂದುವರಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಆಗಾಗ್ಗೆ ಗಲಾಟೆ, ವಾಗ್ವಾದಗಳು ಮುಂದುವರಿಯುತ್ತಲೇ ಇವೆ. 

ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಹಾಗೂ ಬೂದಗುಂಪಾ ಗ್ರಾಮಸ್ಥರ ನಡುವೆ ವಾಗ್ವಾದ ಮತ್ತೆ ನಡೆದಿದೆ.
ಕುರಿ ಮಾರಾಟ ಸಂತೆಯನ್ನು ಮೊದಲು ನಡೆಯುತ್ತಿದ್ದ ಕೂಕನಪಳ್ಳಿ ಗ್ರಾಮದಲ್ಲಿಯೇ ಮಾಡುವಂತೆ ಒತ್ತಾಯ ಕೇಳಿಬಂದಿದೆ. ಕಳೆದ ಮೂರು ವರ್ಷಗಳ ಹಿಂದೆ ಎರಡು ಗ್ರಾಮಸ್ಥರ ನಡುವೆ ಇದೇ ವಿಷಯವಾಗಿ ಗಲಾಟೆ ನಡೆದಿತ್ತು.  

ತಿಂಗಳುವರೆಗೆ ಗಲಾಟೆ ನಡೆದು, ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು. ಈ ಸಧ್ಯ ಬೂದಗುಂಪಾ ಗ್ರಾಮದಲ್ಲಿ ಸಂತೆ  ನಡೆಯುತ್ತಿದೆ. ಎರಡು ಗ್ರಾಮಸ್ಥರ ನಡುವೆ ವ್ಯಾಪಾರಿಗಳು ಹಾಗೂ ಕುರಿಗಾರರಿಗೆ ತೊಂದರೆಯಾಗುತ್ತಿದೆ ಎಂದು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದರೆ, ನಮ್ಮ ಊರಿನಲ್ಲಿ ಕುರಿ ಸಂತೆ ನಡೆಯಬೇಕೆಂದು ಕೂಕನಪಳ್ಳಿ ಮತ್ತು ಬೂದಗುಂಪಾ ಗ್ರಾಮಸ್ಥರು ಪಟ್ಟು ಹಿಡಿದಿರುವುದು ವಾಗ್ವಾದಕ್ಕೆ ಮೂಲವಾಗಿದ್ದು, ಮತ್ತೆ ಗಲಾಟೆ ಮುಂದುವರಿಯುವ ಲಕ್ಷಣಗಳು ಗೋಚರಿಸಿವೆ.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments