Select Your Language

Notifications

webdunia
webdunia
webdunia
webdunia

ಧಾರವಾಡದಲ್ಲಿ ಜಿದ್ಧಾಜಿದ್ದಿನ ಸ್ಫರ್ಧೆ

ಧಾರವಾಡದಲ್ಲಿ ಜಿದ್ಧಾಜಿದ್ದಿನ ಸ್ಫರ್ಧೆ
ಧಾರವಾಡ , ಸೋಮವಾರ, 10 ಏಪ್ರಿಲ್ 2023 (18:50 IST)
ಧಾರವಾಡ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಈ ಏಳರ ಪೈಕಿ ಧಾರವಾಡ ವಿಧಾನಸಭಾ ಕ್ಷೇತ್ರ ಈ ಸಲ ಭಾರೀ ತುರುಸಿನ ಸ್ಪರ್ಧೆಗೆ ಕಾರಣವಾಗಲಿದೆ. ಏಕೆಂದರೆ ಯೋಗೇಶ್​ಗೌಡ ಕೊಲೆ ಕೇಸಿನ ಸಿಬಿಐ ತನಿಖೆಯಲ್ಲಿ ಸಿಕ್ಕು, ಜಿಲ್ಲಾ ಪ್ರವೇಶದ ನಿರ್ಬಂಧದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಈ ಸಲ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.. ಮತ್ತೊಂದೆಡೆ ಹಾಲಿ ಶಾಸಕ ಅಮೃತ ದೇಸಾಯಿ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ.. ಹೀಗಾಗಿ ಈ ಇಬ್ಬರೂ ನಾಯಕರ ಬೆಂಬಲಿಗರು ಈಗಾಗಲೇ ಫೇಸ್​ಬುಕ್​​ನಲ್ಲಿ ದೊಡ್ಡ ಮಟ್ಟದ ವಾರ್ ಶುರು ಮಾಡಿದ್ದಾರೆ.. ಇವರು ಅವರ ಮೇಲೆ, ಅವರು ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುವುದು ಮಾತ್ರವಲ್ಲದೇ ಕೆಲವೊಂದು ಪೋಸ್ಟ್​ಗಳಲ್ಲೂ ವೈಯಕ್ತಿಕ ನಿಂದನೆಯೂ ಶುರುವಾಗಿದೆ.. ಇನ್ನೊಂದೆಡೆ ಅಬ್ಬರದ ಪ್ರಚಾರದ ಮುಖಾಂತರ ಇಬ್ಬರು ನಾಯಕರು ತೊಡೆ ತಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲಾರದಲ್ಲಿ ಬ್ಯಾಂಕ್ ಖಾತೆ ತೆರೆದ ಸಿದ್ದು