Publish Date: Mon, 14 Jan 2019 (19:03 IST)
Updated Date: Mon, 14 Jan 2019 (19:06 IST)
ರಸ್ತೆ ಬದಿಯಲ್ಲಿ ನಿಂತಿದ್ದ ಜನರೇಟರ್ ವಾಹನಕ್ಕೆ ಕಂಟೈನರ್ ಲಾರಿ ಢಿಕ್ಕಿಹೊಡೆದ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ಅತ್ತಿಬೆಲೆಯ ಟಿವಿಎಸ್ ಕ್ರಾಸ್ ಬಳಿ ಘಟನೆ ನಡೆದಿದ್ದು, ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.
ಅಸ್ಸಾಂ ಮೂಲದ ಮೂಹಿಗರ್ ಪಟ್ರ (39) ಸಾವನ್ನಪ್ಪಿದ್ದಾನೆ. ಬಿಹಾರ್ ಮೂಲದ ವಿವೇಕ್, ಉಮರ್ ಮತ್ತೋರ್ವ ಗಾಯಾಳುವಿನ ವಿವರ ತಿಳಿದಿಲ್ಲ.
ಗೇಲ್ ಕಂಪನಿಯ ಗ್ಯಾಸ್ ಲೈನ್ ಕಂಪನಿ ಭೂಮಿ ಅಡಿಯಲ್ಲಿ ಪೈಪ್ ಲೈನ್ ನಿರ್ಮಿಸುತ್ತಿದ್ದ ವೇಳೆ ಘಟನೆ ನಡೆದಿದೆ.
ಪೈಪ್ ಲೈನ್ ವೇಲ್ಡ್ ಮಾಡುತಿದ್ದ ಕಾರ್ಮಿಕರಿಗೆ ಢಿಕ್ಕಿ ಹೊಡೆದು ಜನರೇಟರ್ ವಾಹನಕ್ಕೆ ಕಂಟೈನರ್ ಢಿಕ್ಕಿಯಾದ ಪರಿಣಾಮ ಸಾವು- ನೋವು ಸಂಭವಿಸಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.