Webdunia - Bharat's app for daily news and videos

Install App

ಕಾಂಗ್ರೆಸ್ ದು ಬೂಟಾಟಿಕೆಯ ಪ್ರತಿಭಟನೆ : ಆರ್ ಅಶೋಕ್

Webdunia
ಮಂಗಳವಾರ, 14 ಜೂನ್ 2022 (19:34 IST)
ಸೋನಿಯಾ ಹಾಗೂ ಕುಟುಂಬದ ಅಕ್ರಮ ಆಸ್ತಿ ರಕ್ಷಿಸಲು ಕಾಂಗ್ರೆಸ್ ಧರಣಿ ನಾಟಕವಾಡುತ್ತಿದೆ. ಕಾಂಗ್ರೆಸ್ ಪಕ್ಷದ ಹೆಸರು ಹಾಳು ಮಾಡುತ್ತಿದ್ದಾರೆ.
 
ಕಾಂಗ್ರೆಸ್ ಪ್ರತಿಭಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್
 
ಸಾವಿರಾರು ಸ್ವಾತಂತ್ರ್ಯ ಹೋರಾಟಗಾರು ಸೇರಿ ಕಟ್ಟಿದ ಸಂಸ್ಥೆ ನ್ಯಾಷನಲ್ ಹೆರಾಲ್ಡ್. ನಂತರ ಬಂದ ಸರ್ಕಾರಗಳು ಪತ್ರಿಕೆಯ ಅಭಿವೃದ್ಧಿಗಾಗಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಭೂಮಿ ನೀಡಿದ್ದಾರೆ. ಅದನ್ನು ಕಬಳಿಸಿ ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಳ್ಳಲು ಹೊರಟ ಸೋನಿಯಾ ಹಾಗೂ ರಾಹುಲ್ ಗಾಂಧಿಯವರ ಮೇಲೆ ನಡೆಯುತ್ತಿರುವ ಕೇಸ್ ಇದು. ಕಾಂಗ್ರೆಸ್ ಪಕ್ಷದ ಮೇಲೆ ಯಾರೂ ಕೇಸ್ ಹಾಕಿಲ್ಲ. ಅಕ್ರಮವಾಗಿ ಗಳಿಸಿದ ಗಾಂಧಿ ಕುಟುಂಬದ ಆಸ್ತಿ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷದ ಹೆಸರನ್ನೇ ಇವರೆಲ್ಲ ಸೇರಿ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗಲೂ CBI, ED ಇತ್ತು. ಅದು ಹೇಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅವರಿಗೆ ಗೊತ್ತು. ಒಬ್ಬ ವ್ಯಕ್ತಿ ಇನ್ನೊಬ್ಬರ ಮೇಲೆ ಕೇಸ್ ದಾಖಲಿಸಿದಾಗ ನೋಟಿಸ್ ನೀಡಿ ವಿಚಾರಣೆ ನಡೆಸುವುದು ಕಾನೂನು ಪ್ರಕ್ರಿಯೆ. ಏನೂ ತಪ್ಪು ನಡೆದಿಲ್ಲ ಎನ್ನುವ ಕಾಂಗ್ರೆಸ್ ಗೆ ಭಯ ಯಾಕೆ?  ಭೀತಿ ಯಾಕೆ? ವೃಥಾ ಕೇಂದ್ರದ ಮೇಲೆ ಆರೋಪ ಯಾಕೆ? ಎಂದು ಮಾರ್ಮಿಕವಾಗಿ ಹೇಳಿದರು. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಏನೂ ತಪ್ಪು ಮಾಡಿರದಿದ್ದರೆ ಭಯ ಯಾಕೆ. ಒಂದು‌ ಕುಟುಂಬ ರಕ್ಷಿಸಲು ಈ ನಾಯಕರು ಕಾಂಗ್ರೆಸ್ ಹೆಸರನ್ನು ಹಾಳು ಮಾಡುತ್ತಿದ್ದಾರೆ.
 
ಕಾಂಗ್ರೆಸ್ ನವರು ಎಮರ್ಜೆನ್ಸಿಗಿಂತ ಇದು ಕೆಟ್ಟದ್ದು. ಈಗಲಾದರೂ ಎಮರ್ಜೆನ್ಸಿ ಹೇರಿದ್ದು ತಪ್ಪು ಎಂದು ಅರ್ಥ ಆದರೆ ಸಾಕು. ಅಧಿಕಾರಕ್ಕಾಗಿ ಮಾಧ್ಯಮಗಳಿಗೆ, ಸಾರ್ವಜನಿಕ ಅಭಿಪ್ರಾಯಕ್ಕೆ ಕಡಿವಾಣ ಹಾಕಿ, ದೇಶವನ್ನೇ ಕತ್ತಲೆಯಲ್ಲಿಟ್ಟ ಸ್ವಾರ್ಥಿಗಳಿಗೆ, ವಿಚಾರಣೆಗೆ ಕರೆದದ್ದು ತಪ್ಪು ಎಂದು ಯಾವ ನೈತಿಕತೆ ಇದೆ ಎಂದು ಖಾರವಾಗಿ ಪ್ರಶ್ನಿಸಿದರು. ಇಂದು ಭಾರತ, ಇಟಲಿ ಅಲ್ಲ. ಇಲ್ಲಿಯ ಕಾನೂನಿಗೆ ಬೆಲೆ ಕೊಡಲೇಬೇಕು. ಹತಾಶೆಯಿಂದ, ರಾಜಕೀಯ ಮಾಡಲು ಪ್ರತಿಭಟನೆ ಮಾಡಿದರೆ ರಾಜ್ಯದ ಜನ ನಿಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸುವ ದಿನ ದೂರವಿಲ್ಲ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Jammu Kashmir attack: ಜಮ್ಮು ಕಾಶ್ಮೀರದಲ್ಲಿ ರೆಸಾರ್ಟ್ ಮೇಲೆ ಪಾಕ್ ಉಗ್ರರ ದಾಳಿ: ಇಬ್ಬರ ಸಾವು, ಪ್ರವಾಸಿಗರಲ್ಲಿ ಭಯ

ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ನಲ್ಲಿ ಮತ್ತೊಂದು ಹಿನ್ನಡೆ: ಮಾಜಿ ಸಂಸದನಿಗೆ ಪರಪ್ಪನ ಅಗ್ರಹಾರವೇ ಗತಿ

ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ: ವಿವಾದದ ಬೆನ್ನಲ್ಲೇ ಮತ್ತೆ ಗುಡುಗಿದ ಉಪರಾಷ್ಟ್ರಪತಿ ಜಗದೀಪ್ ಧನಕರ್‌

ಕೋರ್ಟ್‌ ವಾತಾವರಣ ಹಾಳು ಮಾಡಿದ ವಕೀಲನಿಗೆ ₹5 ಲಕ್ಷ ದಂಡ ವಿಧಿಸಿ ಬುದ್ಧಿ ಕಲಿಸಿದ ಸುಪ್ರೀಂ ಕೋರ್ಟ್‌

ಯುಪಿಎಸ್‌ಸಿ ಫಲಿತಾಂಶ ಪ್ರಕಟ: 1009 ಮಂದಿ ನೇಮಕಾತಿ, ಟಾಪರ್‌ ಶಕ್ತಿ ದುಬೆ ಓದಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments