Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನದ್ದು ಎಲೆಕ್ಷನ್ ಹಿಂದುತ್ವ- ಮುರಳಿಧರರಾವ್

ಕಾಂಗ್ರೆಸ್ ನದ್ದು ಎಲೆಕ್ಷನ್ ಹಿಂದುತ್ವ- ಮುರಳಿಧರರಾವ್
ದಾವಣಗೆರೆ , ಶನಿವಾರ, 17 ಫೆಬ್ರವರಿ 2018 (10:54 IST)

ಕಾಂಗ್ರೆಸ್ ಪಕ್ಷದ್ದು ಎಲೆಕ್ಷನ್ ಹಿಂದುತ್ವ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರರಾವ್ ವ್ಯಂಗ್ಯವಾಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬಂದಾಗ ಮಾತ್ರ ಹಿಂದೂಗಳು ನೆನಪಾಗುತ್ತಾರೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಚುನಾವಣೆ ಸಮೀಪಿಸಿರುವುದರಿಂದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಹಿಂದೂಗಳ ಬಗ್ಗೆ ನಿಜವಾದ ಕಾಳಜಿಯಿಲ್ಲ. ಅವರದು ಚುನಾವಣೆಯ ಗಿಮಿಕ್ ಮಾತ್ರ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರಾಜ್ಯಕ್ಕೆ ಬಂದಾಗ ಬಂದ್ ನಡೆಸಿದ್ದ ಹೋರಾಟಗಾರರು ರಾಹುಲ್ ಗಾಂಧಿ ಬಂದಾಗ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

‘ವಾಟ್ ನಾನ್ ಸೆನ್ಸ್ ಯೂ ಆರ್ ಟಾಕಿಂಗ್ ರಾಮಲಿಂಗಾರೆಡ್ಡಿ?’