Select Your Language

Notifications

webdunia
webdunia
webdunia
webdunia

ಸಭಾಪತಿ ಸ್ಥಾನ: ಹೈಕಮಾಂಡ್ ಗೆ ಕೈ ಶಾಸಕರ ದೂರು

ಸಭಾಪತಿ ಸ್ಥಾನ: ಹೈಕಮಾಂಡ್ ಗೆ ಕೈ ಶಾಸಕರ ದೂರು
ಬೆಳಗಾವಿ , ಗುರುವಾರ, 13 ಡಿಸೆಂಬರ್ 2018 (19:49 IST)
ವಿಧಾನ ಪರಿಷತ್ ಸಭಾಪತಿಯಾಗಿ ಮಾಜಿ ಸಚಿವ ಎಸ್.ಆರ್. ಪಾಟೀಲ್ ರವರನ್ನು ಆಯ್ಕೆ ಮಾಡದೇ ಇರುವುದು ದುರ್ದೈವ ಎಂದಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್, ಸರ್ಕಾರದಲ್ಲಿ ಮೊದಲಿನಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಸಭಾಪತಿ ಸ್ಥಾನಕ್ಕೆ ಪರಿಗಣಿಸದೇ ಇರುವ ಕುರಿತು ಹೈಕಮಾಂಡ್ ಗೆ ದೂರು ನೀಡಲು ಕೆಲವು ಶಾಸಕರು ಸಿದ್ಧರಾಗಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಸ್ಥಾನ ಎಸ್.ಆರ್. ಪಾಟೀಲ್ ರವರಿಗೆ ಕೈತಪ್ಪಿ ದ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ, ಅತೃಪ್ತಿಗೆ ಕಾರಣವಾಗಿದೆ. ಸಂಬಂಧ ಹೈಕಮಾಂಡ್ಗೆ ದೂರು ನೀಡಲು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ನಿರ್ಧರಿಸಿದ್ದಾರೆ.

ರಾಜ್ಯ ಕಾಂಗ್ರೆಸ್ನಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಅವರಿಗೆ ದೂರು ನೀಡಲು ಹಿರಿಯ ಶಾಸಕರು ತೀರ್ಮಾನಕ್ಕೆ ಬಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳರ ಗ್ಯಾಂಗ್ ನಾಯಕನ ಮೇಲೆ ಫೈರಿಂಗ್