Select Your Language

Notifications

webdunia
webdunia
webdunia
webdunia

ಇದೀಗ ಯಡಿಯೂರಪ್ಪಗೆ ವೀರಶೈವರ ನೆನಪಾಗಿದೆ: ಶಾಸಕ ಕಾಶಪ್ಪನವರ್ ಲೇವಡಿ

ಇದೀಗ ಯಡಿಯೂರಪ್ಪಗೆ ವೀರಶೈವರ ನೆನಪಾಗಿದೆ: ಶಾಸಕ ಕಾಶಪ್ಪನವರ್ ಲೇವಡಿ
ಬೆಂಗಳೂರು , ಶನಿವಾರ, 1 ಏಪ್ರಿಲ್ 2017 (14:00 IST)
ಕಾಂಗ್ರೆಸ್‌ನಲ್ಲೂ ವೀರಶೈವ ನಾಯಕರಿದ್ದು ಪಕ್ಷದಲ್ಲಿರುವ ವೀರಶೈವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. 
 
ಯಡಿಯೂರಪ್ಪ ಅವರಿಗೆ ಈಗ ವೀರಶೈವರ ನೆನಪಾಗಿದೆ. ಇಷ್ಟು ದಿನ ಎಲ್ಲಿ ಹೋಗಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಬಂದ ಕೂಡಲೇ ಅವರಿಗೆ ವೀರಶೈವರ ನೆನಪಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
 
ಉಪಚುನಾವಣೆ ನಡೆಯುತ್ತಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯನವರ ಪಾರದರ್ಶಕ ಅಡಳಿತ, ರೈತರು ಮತ್ತು ಜನತೆಯ ಪರವಾಗಿದ್ದರಿಂದ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ್ ಕಾಶಪ್ಪನವರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಹುದ್ದೆ: ಮೋಹನ್ ಭಾಗವತ್ ಪರ ಜಾಫರ್‌ ಷರೀಫ್ ಬ್ಯಾಟಿಂಗ್