Select Your Language

Notifications

webdunia
webdunia
webdunia
webdunia

ರಾಜೀನಾಮೆ ನಿರ್ಧಾರ ಹಿಂಪಡೆದ ಶಾಸಕ ಸುಧಾಕರ್ ರೆಡ್ಡಿ

ರಾಜೀನಾಮೆ ನಿರ್ಧಾರ ಹಿಂಪಡೆದ ಶಾಸಕ ಸುಧಾಕರ್ ರೆಡ್ಡಿ
ಬೆಂಗಳೂರು , ಶುಕ್ರವಾರ, 7 ಜುಲೈ 2017 (12:22 IST)
ಕಾಂಗ್ರೆಸ್ ಮುಖಂಡರು ಶಾಸಕ ಸುಧಾಕರ್ ರೆಡ್ಡಿ ಜೊತೆ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಶಾಸಕ ಸುಧಾಕರ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ವೈಯಕ್ತಿಕ ವಿಚಾರಗಳನ್ನ ಬದಿಗೊತ್ತಿ ಪಕ್ಷ, ಸಮಾಜದ ಹಿತಾಸಕ್ತಿಯಿಂದ ನಿರ್ಧಾರ ಹಿಂಪಡೆದಿದ್ದಾಗಿ ಘೋಷಿಸಿದ್ದಾರೆ.

ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸುಧಾಕರ್ ರೆಡ್ಡಿ ಅವರ ತಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿರುವ ಕೇಶವ್ ರೆಡ್ಡಿ ಪದಚ್ಯುತಿಗೆ ಒತ್ತಾಯ ಕೇಳಿಬಂದಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸುಧಾಕರ್ ರೆಡ್ಡಿ, ತಂದೆಯನ್ನ ಪದಚ್ಯುತಿಗೊಳಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಟ್ವೀಟ್ ಮಾಡಿದ್ದರು. ಚಿಕ್ಕಬಳ್ಳಾಪುರದಿಂದ ಾಗಮಿಸಿದ್ದ ನೂರಾರು ಕಾಂಗ್ರೆಸ್ ಸದಸ್ಯರು ಸದಾಶಿವನಗರದ ಸುಧಾಕರ್ ರೆಡ್ಡಿ ಮನೆ ಮುಂದೆ ಬೀಡು ಬಿಟ್ಟು ರಾಜೀನಾಮೆ ಕೊಡದಂತೆ ಒತ್ತಾಯಿಸಿದ್ದರು.

ಈ ಮಧ್ಯೆ, ಸುಧಾಕರ್ ರೆಡ್ಡಿ ಮನೆಗೆ ದೌಡಾಯಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಮನವೊಲಿಕೆ ಪ್ರಯತ್ನ ನಡೆಸಿದ್ದರು.

 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರನ ನಂತ್ರ ಸುನೀಲ್ ಭೋಸ್‌ಗೂ ಸಾಂವಿಧಾನಿಕ ಹುದ್ದೆ ನೀಡಿದ ಸಿಎಂ ಸಿದ್ದರಾಮಯ್ಯ